ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇಂದು ಇನ್ನಷ್ಟು ಮಳೆ : ಸತ್ತವರ ಸಂಖ್ಯೆ 25ಕ್ಕೆ ಏರಿಕೆ
ಬೆಂಗಳೂರು, ಆಗಸ್ಟ್ 08 : ಮಳೆ ಪರಿಣಾಮ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 25ಕ್ಕೆ ಏರಿದೆ.
ಒಬ್ಬ ಮೀನುಗಾರ ಸೇರಿದಂತೆ ಇಬ್ಬರು ವ್ಯಕ್ತಿಗಳು ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಮೃತಪಟ್ಟಿದ್ದಾರೆ. ಮೀನು ಹಿಡಿಯಲು ಸಮುದ್ರಕ್ಕೆ ಇಳಿದಿದ್ದ ಮೀನುಗಾರ, ದೋಣಿ ಮುಳುಗಿ ಮೃತಪಟ್ಟರು. ಸುರತ್ಕಲ್ ನಲ್ಲಿ ಮಹಿಳೆಯೊಬ್ಬಳು ಮನೆ ಕುಸಿದು ಸಾವನ್ನಪ್ಪಿದ್ದಾಳೆ.
ನದಿದಂಡೆಯ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ. ಧಾರವಾಡ ಮತ್ತು ಹಾವೇರಿ ಜಿಲ್ಲೆಯಲ್ಲಿ ಸಾವಿರಾರು ಎಕರೆ ಬೆಳೆ, ಮಳೆ ಪರಿಣಾಮ ಹಾಳಾಗಿದೆ. ಕುಮದ್ವತಿ ಪ್ರವಾಹದಿಂದ ರಕ್ಷಿಸಲು, ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಮಂಗಳೂರು ವರದಿಗಳ ಪ್ರಕಾರ, ಮಳೆ ನಾಲ್ಕನೇ ದಿನವೂ ಮುಂದುವರೆದಿದೆ. ಕುಂದಾಪುರ ಮತ್ತು ಉಡುಪಿ ತಾಲೂಕಿನಲ್ಲಿ ಏಳು ಮನೆಗಳು ಕುಸಿದಿವೆ.
ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಗಳಲ್ಲೂ ಮಳೆ ಮುಂದುವರೆದಿದೆ.
(ಯುಎನ್ಐ)
ಪೂರಕ
ಓದಿಗೆ-
ಕರ್ನಾಟಕದ
ವಿವಿಧೆಡೆ
ಇನ್ನೆರಡು
ದಿನ
ವರುಣನ
ಠಿಕಾಣಿ!
Comments
Story first published: Wednesday, August 8, 2007, 5:30 [IST]