ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಳೆಯಿಂದ ಸಾವಿರ ಕೋಟಿ ನಷ್ಟ : ಉಪ ಮುಖ್ಯಮಂತ್ರಿ
ಬೆಂಗಳೂರು, ಆಗಸ್ಟ್ 08 : ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರೋಪಾಯಗಳಿಗಾಗಿ, ಕೇಂದ್ರದ ನೆರವು ಕೋರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸುದ್ದಿಗಾರರ ಜೊತೆ ಈ ಬಗ್ಗೆ ಬುಧವಾರ ಮಾತನಾಡುತ್ತಿದ್ದ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸದ್ಯದಲ್ಲೇ ರಾಜ್ಯದ ಸರ್ವ ಪಕ್ಷ ನಿಯೋಗ ಪ್ರಧಾನಿ ಅವರನ್ನು ಭೇಟಿ ಮಾಡಿ, ಆರ್ಥಿಕ ನೆರವು ಕೋರಲಿದೆ ಎಂದರು.
ತುರ್ತು ಪರಿಹಾರೋಪಾಯ ಕಾರ್ಯಗಳಿಗಾಗಿ ಕೂಡಲೇ 300 ಕೋಟಿ ರೂ.ಬಿಡುಗಡೆ ಮಾಡುವಂತೆ ಕೇಂದ್ರವನ್ನು ಯಡಿಯೂರಪ್ಪ ಒತ್ತಾಯಿಸಿದರು.
ರಾಜ್ಯದ 13ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಮತ್ತು ಪ್ರವಾಹದಿಂದ ಅಪಾರ ಆಸ್ತಿಪಾಸ್ತಿ ನಷ್ಟವಾಗಿದೆ. ನಷ್ಟದ ಪ್ರಮಾಣ ಸಾವಿರ ಕೋಟಿ ರೂ.ಮೀರಿದೆ . ಕಳೆದ 30ವರ್ಷಗಳಲ್ಲಿ ಎಂದೂ ಕಾಣದ ದಾಖಲೆ ಮಳೆ ಈ ವರ್ಷ ಬಿದ್ದಿದೆ ಎಂದು ಯಡಿಯೂರಪ್ಪ, ತಾವು ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಂಟಿಯಾಗಿ ಗುರುವಾರ ವೈಮಾನಿಕ ಸಮೀಕ್ಷೆ ನಡೆಸುವುದಾಗಿ ಪ್ರಕಟಿಸಿದರು.
(ಯುಎನ್ಐ)
Comments
Story first published: Wednesday, August 8, 2007, 5:30 [IST]