ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ಪೊಲೀಸರ ಬಲೆಯಲ್ಲಿ ಸಿಕ್ಕಿಬಿದ್ದ ಸರಣಿ ಹಂತಕ

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 05 : ಬೆಂಗಳೂರು :ಹುಣ್ಣಿಮೆ ಅಥವಾ ಅಮಾನಾಸ್ಯೆ ದಿನ ಕೊಲೆ ಮಾಡುತ್ತಿದ್ದ ವಿಕೃತ ಮನಸ್ಸಿನ ಸರಣಿ ಹಂತಕನೊಬ್ಬನನ್ನು ಹಿಡಿಯುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಈತನ ಹೆಸರು ಗಿರೀಶ್‌ಬಾಬು ಅಲಿಯಾಸ್ ಗಿರೀಶ್(25), ಕಲಾಸಿಪಾಳ್ಯದ ಮೋತಿನಗರದ ಪಾಟರ್ಸ್ ಕಾಲನಿಯ ನಿವಾಸಿ. ಕಳೆದ ಎರಡು ವರ್ಷಗಳಲ್ಲಿ ಈತ ನಾಲ್ಕು ಕೊಲೆ ಮಾಡಿದ್ದಾನೆ.

ಶನಿವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎನ್‌.ಅಚ್ಯುತರಾವ್‌, ಗಾಂಜಾ ಹಾಗೂ ಮದ್ಯ ಸೇವಿಸುತ್ತಿದ್ದ ಗಿರೀಶ್ ಮಧ್ಯರಾತ್ರಿಯವೆರೆಗೆ ಸುತ್ತುತ್ತಿದ್ದ.ಟಿವಿಯಲ್ಲಿ ಹಾರರ್ ಸಿನಿಮಾ ಹಾಗೂ ಡಬ್ಲ್ಯೂ ಡಬ್ಲ್ಯೂ ಎಫ್ ಕಾರ್ಯಕ್ರಮಗಳನ್ನು ನೋಡುತ್ತಿದ್ದ. ಹುಣ್ಣಿಮೆ ದಿನಗಳಂದು, ಅಂಗಡಿ ಮುಂಗಟ್ಟುಗಳ ಮುಂದೆ ಮಲಗುತ್ತಿದ್ದ ಅಮಾಯಕರ ತಲೆ ಮೇಲೆ ಕಲ್ಲುಹಾಕಿ ಕೊಲೆ ಮಾಡುತ್ತಿದ್ದ ಎಂದು ವಿವರಿಸಿದರು.

ನಾನು ಹುಟ್ಟಿದ್ದು ಅಮಾವಾಸ್ಯೆ ದಿನ. ಹುಣ್ಣಿಮೆ ಅಥವಾ ಅಮಾವಾಸ್ಯೆ ದಿನದಂದು ಯಾರಿಗಾದರೂ ಹೊಡೆಯಬೇಕೆಂದು ಮನಸ್ಸಿಗೆ ಬರುತ್ತದೆ. ರಾತ್ರಿ ಓಡಾಡುವುದೆಂದರೆ ತುಂಬ ಇಷ್ಟ. ಗಾಂಜಾ ಮತ್ತು ಮದ್ಯ ಸೇವಿಸಿದೆ ಏನೂ ಕಾಣುವುದಿಲ್ಲ. ನಶೆಯಲ್ಲಿದ್ದರೆ ಒಂಟಿಯಾಗಿ ಮಲಗಿದ್ದವರನ್ನು ಕೊಲ್ಲುವ ಬಯಕೆಯುಂಟಾಗುತ್ತದೆ ಎಂದು ಆತ ವಿಚಾರಣೆ ವೇಳೆಯಲ್ಲಿ ಹೇಳಿದ್ದಾನೆ ಎಂದು ರಾವ್ ತಿಳಿಸಿದರು.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X