ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೆಪ್ಟೆಂಬರ್ 11ರಿಂದ ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ : ಕುಮಾರಸ್ವಾಮಿ
ಕನಕಪುರ, ಆಗಸ್ಟ್ 05 : ಸೆಪ್ಟೆಂಬರ್ 11ರಂದು ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಶನಿವಾರ ಇಲ್ಲಿಗೆ ಸಮೀಪದ ಜೆಟ್ಟಿದೊಡ್ಡಿಯಲ್ಲಿ, ಅವರು ಗ್ರಾಮವಾಸ್ತವ್ಯ ಹೂಡಿದ್ದರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಜಿಲ್ಲೆಗಳ ರಚನೆಗೆ ಸಂಬಂಧಿಸಿದಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ದೃಷ್ಟಿಯಿಂದ ನೂತನ ಜಿಲ್ಲೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ವಿಷಯದಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಲಕ್ಕಯ್ಯ ಹಾಗೂ ಚಿಕ್ಕ ತಾಯಮ್ಮ ದಂಪತಿಗಳ ಮನೆಯಲ್ಲಿ ಕುಮಾರಸ್ವಾಮಿ ವಾಸವಾಗಿದ್ದರು.
(ಏಜನ್ಸೀಸ್)
Story first published: Sunday, August 5, 2007, 5:30 [IST]