ಕಾರಾಗೃಹ ಡಿಐಜಿ ಬಿ.ಎಸ್.ಅಬ್ಬಾಯಿ ನೇಣಿಗೆ ಶರಣು
ಬೆಂಗಳೂರು, ಆಗಸ್ಟ್ 05 :ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಡಿಐಜಿ ಬಿ.ಎಸ್.ಅಬ್ಬಾಯಿ(52) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮಧ್ಯಾಹ್ನ ಕರ್ತವ್ಯ ಮುಗಿಸಿಕೊಂಡು ಮನೆಗೆ ಬಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಕಾರ್ ಡ್ರೈವರ್ ಸಂಜೆ ಕೆಲಸಕ್ಕೆ ಕರೆದುಕೊಂಡು ಹೋಗಲು ಬಂದಾಗ, ಮನೆ ಬಾಗಿಲು ತಟ್ಟಿದ್ದಾನೆ. ಬಾಗಿಲು ತೆರೆಯದಿದ್ದಾಗ ಡ್ರೈವರ್ ಕಿಟಕಿಯಲ್ಲಿ ಇಣುಕಿದ್ದಾನೆ. ಆಗ ಶವ ನೇತಾಡುತ್ತಿರುವುದು ಕಂಡು ಬಂದಿದೆ.
ಆರನೇ ತರಗತಿ ಓದುತ್ತಿರುವ ಮಗ ಶಿವಪ್ರಸಾದ್ ಶಾಲೆಗೆ ಹೋಗಿದ್ದ. ಹೆಂಡತಿ ಗಿರಿಜಾ ಕಾರ್ಯ ನಿಮಿತ್ತ ಹೊರಗಡೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವ ಸಮಯಲ್ಲಿ ಅಬ್ಬಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾನು ಯಾವ ತಪ್ಪೂ ಮಾಡಿಲ್ಲ. ಕೈದಿಗಳನ್ನೂ ತಪ್ಪು ಮಾಡಲು ಬಿಟ್ಟಿಲ್ಲ. ನನಗೆ ಮಾನಸಿಕ ಹಿಂಸೆಯಾಗಿದೆ. ನನ್ನ ಮಗ ಮತ್ತು ಹೆಂಡತಿಯನ್ನು ಬಿಟ್ಟು ಹೋಗಲು ನೋವಾಗುತ್ತಿದೆ ಎಂದು ಬರೆದಿಟ್ಟುಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕು ಜಾಲಿಕೊಪ್ಪದ ವರಾದಅಬ್ಬಾಯಿ, 1978ರಲ್ಲಿ ಬಂದಿಖಾನೆ ಇಲಾಖೆ ಸಬ್ಇನ್ಸ್ಪೆಕ್ಟರ್ ಆಗಿ ಸೇವೆಗೆ ಸೇರ್ಪಡೆಯಾಗಿದ್ದರು.
(ಏಜನ್ಸೀಸ್)