ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅನ್ನದಾತರ ಕಷ್ಟವನ್ನು ಹೇಳಿದ ಸಾಯಿನಾಥ್ ಗೆ ಮ್ಯಾಗ್ಸೆಸೆ
ನವದೆಹಲಿ, ಆಗಸ್ಟ್ 01 : ಎವ್ರಿಬಡಿ ಲವ್ಸ್ ಎ ಗುಡ್ ಡ್ರಾಟ್ಕೃತಿಯ ಲೇಖಕ ಮತ್ತು ಖ್ಯಾತ ಪತ್ರಕರ್ತ ಪಾಲಗುಮ್ಮಿ ಸಾಯಿನಾಥ್ ಅವರಿಗೆ, ಪ್ರತಿಷ್ಠಿತ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಸಂದಿದೆ.
ತಮ್ಮನ್ನು ತಾವು ಗ್ರಾಮೀಣ ಪತ್ರಕರ್ತ ಎಂದು ಕರೆದುಕೊಳ್ಳುವ ಪಿ.ಸಾಯಿನಾಥ್ ಅವರ ಪತ್ರಿಕೋದ್ಯಮದ ಸೇವೆಯನ್ನು ಪರಿಗಣಿಸಿ, ಪ್ರಶಸ್ತಿ ನೀಡಲಾಗಿದೆ. ಏಷ್ಯಾದ ನೊಬೆಲ್ ಎಂಬ ಹೆಗ್ಗಳಿಕೆಯನ್ನು, ಮ್ಯಾಗ್ಸೆಸೆ ಪ್ರಶಸ್ತಿ ಹೊಂದಿದೆ.
ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಪಿ.ಸಾಯಿನಾಥ್ ಬರೆದ ವಿಚಾರಗಳು, ಎಲ್ಲರ ಗಮನ ಸೆಳೆದಿವೆ. ಆ.31ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಆಂಧ್ರದ ಸಾಯಿನಾಥ್, ರೈತರ ಪರಿಸ್ಥಿತಿ ದಾಖಲಿಸಲು ಐದಾರು ಸಾವಿರ ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸಿರುವುದು ಇನ್ನೊಂದು ವಿಶೇಷ.
(ಏಜನ್ಸೀಸ್)
Comments
Story first published: Wednesday, August 1, 2007, 5:30 [IST]