ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂಗಳವಾರದ ಮಲ್ನಾಡ್ ಬಂದ್ ಯಶಸ್ಸಿಗೆ ವ್ಯಾಪಕ ಯತ್ನ
ಶೃಂಗೇರಿ, ಜುಲೈ 30 :ಇಲ್ಲಿನ ಶಾಂತಿ ಸಮಿತಿ ಕರೆ ನೀಡಿರುವ ಜುಲೈ 31ರ ಮಲೆನಾಡು ಬಂದ್ ಗೆ ವ್ಯಾಪಕ ಬೆಂಬಲ ದೊರೆಯುವ ನಿರೀಕ್ಷೆಯನ್ನು ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ವ್ಯಕ್ತಪಡಿಸಿದ್ದಾರೆ.
ಮಲೆನಾಡಿನಲ್ಲಿ ನಡೆದಿರುವ ಹಿಂಸಾಚಾರದ ವಿರುದ್ಧ ಬಂದ್ ಗೆ ಕರೆ ನೀಡಲಾಗಿದೆ. ಈ ಬಂದ್ ಯಾವೊಬ್ಬ ವ್ಯಕ್ತಿಯನ್ನು ಅಥವ ಸಂಘಟನೆಗಳ ವಿರುದ್ಧವಾಗಲಿ ಅಲ್ಲ . ಪ್ರಜಾಪ್ರಭುತ್ವದಲ್ಲಿ ಹಿಂಸೆಯಿಂದ ಏನೂ ಸಾಧ್ಯವಿಲ್ಲ. ಸರ್ಕಾರ ಇಲ್ಲಿನ ಜನರಿಗೆ ಅಗತ್ಯವಾದ ಸೌಲಭ್ಯಗಳನ್ನು ನೀಡಬೇಕು. ಕುದುರೆಮುಖ ಬಳಿಯ ಅಭಯಾರಣ್ಯದಿಂದ ಗಿರಿಜನರನ್ನು ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ ಎಂದು ಚಂದ್ರೇಗೌಡ ಹೇಳಿದರು.
ಶಾಂತಿಯುತವಾಗಿ ಬಂದ್ ಆಚರಿಸಿ, ನಕ್ಸಲ್ ಹಿಂಸಾಚಾರವನ್ನು ಖಂಡಿಸುತ್ತೇವೆ ಎಂಬುದನ್ನು ಸಾಬೀತು ಮಾಡಿ ಎಂದು ಕ್ಷೇತ್ರದ ಜನತೆಯಲ್ಲಿ ಶಾಸಕ ಜೀವರಾಜ್ ಮನವಿ ಮಾಡಿದ್ದಾರೆ.
ನಕ್ಸಲ್ ಚಟುವಟಿಕೆ ವಿರೋಧಿಸಲು,ಇತ್ತೀಚೆಗೆ ಇಲ್ಲಿ ಶಾಂತಿ ಸಮಿತಿ ರೂಪುಗೊಂಡಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, July 30, 2007, 5:30 [IST]