ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾಡಿಗ್, ಜಯಂತಿ ಸೇರಿ 39ಮಂದಿಗೆ ಕೆಂಪೇಗೌಡ ಪ್ರಶಸ್ತಿ
ಬೆಂಗಳೂರು, ಜುಲೈ 30 : ನಟಿ ಜಯಂತಿ, ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್ ಜಿ,ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಸೇರಿದಂತೆ 39 ಗಣ್ಯರಿಗೆ ಪ್ರಸಕ್ತ ಸಾಲಿನ ಕೆಂಪೇಗೌಡ ಪ್ರಶಸ್ತಿ ನೀಡಲಾಗಿದೆ.
ಬೆಂಗಳೂರು ಮಹಾನಗರ ಪಾಲಿಕೆ, ಈ ಪ್ರಶಸ್ತಿಯನ್ನು ಕೆಂಪೇಗೌಡ ದಿನಾಚರಣೆ(ಜು.31) ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ. ಕಂಠೀರವ ಕ್ರೀಡಾಂಗಣದಲ್ಲಿ ಸಮಾರಂಭ ನಡೆಯಲಿದ್ದು, ಗಣ್ಯ ವ್ಯಕ್ತಿಗಳ ಜೊತೆಗೆ 5ಸಂಘ ಸಂಸ್ಥೆಗಳನ್ನೂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಮುಖ
ಪ್ರಶಸ್ತಿ
ವಿಜೇತರು
:
- ಡಾ.ಸುಮತೀಂದ್ರ ನಾಡಿಗ್(ಸಾಹಿತ್ಯ)
- ಡಾಂ.ಎಂ.ಚಿದಾನಂದ ಮೂರ್ತಿ(ಶಿಕ್ಷಣ ಸಂಶೋಧನೆ)
- ಕಸ್ತೂರಿ ಶಂಕರ್(ಸಂಗೀತ)
- ಡಾ.ವಿವೇಕ್ ಜವಳಿ(ಹೃದಯ ತಜ್ಞ)
- ಡಾ.ಕಿರಣ್ ಮಜುಂದಾರ್ (ಜೈವಿಕ ತಂತ್ರಜ್ಞಾನ)
- ಅಜೀಂ ಪ್ರೇಮ್ ಜಿ(ಮಾಹಿತಿ ತಂತ್ರಜ್ಞಾನ)
- ಸಿ.ಹೆಚ್.ಹನುಮಂತರಾಯ(ವಕೀಲ)
- ಈಶ್ವರ ಪ್ರಸಾದ್(ಪರಿಸರ)
- ನಾಗಮಣಿ ಎಸ್.ರಾವ್(ಪತ್ರಿಕೋದ್ಯಮ)
- ಶೂದ್ರ ಶ್ರೀನಿವಾಸ್(ಪತ್ರಿಕೋದ್ಯಮ)
- ಶಶಿಧರ ಭಟ್(ವಿದ್ಯುನ್ಮಾನ ಮಾಧ್ಯಮ)
- ಗೀತಪ್ರಿಯ(ಚಲನಚಿತ್ರ)
- ಮಹೇಶ್ ಭೂಪತಿ(ಕ್ರೀಡೆ)
- ಗಣೇಶ್(ಅಷ್ಟಾವಧಾನಿ)
- ಆಟೋ ರಾಜ(ಸೇವೆ)
Comments
Story first published: Monday, July 30, 2007, 5:30 [IST]