ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತವರಿಗೆ ಬಂದ ಹನೀಫ್ ಗೆ ಉದ್ಯೋಗ ನೀಡಲು ಪೈಪೋಟಿ!
ಬೆಂಗಳೂರು, ಜುಲೈ 30 : ಕಳಂಕ ಮುಕ್ತರಾಗಿ ತವರಿಗೆ ಮರಳಿರುವ ಡಾ.ಮಹಮದ್ ಹನೀಫ್ ಅವರಿಗೆ, ಉದ್ಯೋಗ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇಂದು(ಜು.30) ಹನೀಫ್ ಅವರನ್ನು ಭೇಟಿ ಮಾಡಲಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸೀನಿಯರ್ ಪ್ರಾಕ್ಟಿಷನರ್ ಹುದ್ದೆ ನಿರ್ವಹಿಸುವಂತೆ ಆಹ್ವಾನ ನೀಡಲಿದ್ದಾರೆ.
ಮತ್ತೊಂದು ಕಡೆ, ಹನೀಫ್ ಓದಿದ ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜು, ಬೋಧಕ ಹುದ್ದೆ ನೀಡಲು ಮುಂದೆ ಬಂದಿದೆ. ಹನೀಫ್ ತವರಿನಲ್ಲಿಯೇ ಉಳಿಯುತ್ತಾರೋ ಅಥವಾ ಮತ್ತೆ ಆಸ್ಟ್ರೇಲಿಯಾಕ್ಕೆ ಮರಳುತ್ತಾರೋ ಇನ್ನು ಸ್ಫಷ್ಟವಾಗಿಲ್ಲ.
ಆಸ್ಟ್ರೇಲಿಯಾ ವಕೀಲ ಪೀಟರ್ ರುಸ್ಸೋ ಜೊತೆ ಹನೀಫ್, ಭಾನುವಾರ ರಾತ್ರಿ 11ರ ಸುಮಾರಿನಲ್ಲಿ ತಮ್ಮ ಮನೆ ಪ್ರವೇಶಿಸಿದರು. ಬಿಟಿಎಂ ಲೇಔಟ್ ನಲ್ಲಿರುವ ಹನೀಫ್ ಮನೆಯಲ್ಲಿ ಸಂಭ್ರಮ ತುಂಬಿ ತುಳುಕುತ್ತಿತ್ತು. ಮನೆಗೆ ಬಂದ ತಕ್ಷಣ ಮಗಳನ್ನು ಎತ್ತಿ ಮುದ್ದಾಡಿದ ಹನೀಫ್, ಭಾವುಕರಾದರು.
ವಿಮಾನ ನಿಲ್ದಾಣದಿಂದ ಮಸೀದಿಗೆ ತೆರಳಿದ ಹನೀಫ್, ಪ್ರಾರ್ಥನೆ ಸಲ್ಲಿಸಿದರು. ಆನಂತರ ಮನೆಗೆ ಆಗಮಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, July 30, 2007, 5:30 [IST]