ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರು ಭಯೋತ್ಪಾದನಾ ಕೇಂದ್ರವಲ್ಲ : ಕುಮಾರಸ್ವಾಮಿ
ಬೆಂಗಳೂರು, ಜುಲೈ 29 : ಆಸ್ಟ್ರೇಲಿಯಾ ಪೊಲೀಸ್ ಡಾ.ಮೊಹಮ್ಮದ್ ಹನೀಫ್ ವಿರುದ್ಧದ ಆರೋಪಗಳನ್ನು ಕೈಬಿಡುವುದರೊಂದಿಗೆ, ಬೆಂಗಳೂರು ಭಯೋತ್ಪಾದನಾ ಕೇಂದ್ರವಾಗುತ್ತಿಲ್ಲ ಎಂಬುದು ಸಾಬೀತಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಶನಿವಾರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಆಸ್ಟ್ರೇಲಿಯಾ ಪೊಲೀಸರು ಡಾ.ಮೊಹಮ್ಮದ್ ಹನೀಫ್ ವಿರುದ್ಧದ ಆರೋಪಗಳನ್ನು ಕೈ ಬಿಟ್ಟ ಸುದ್ದಿ ಕೇಳಿ, ತುಂಬಾ ನಿರಾಳಗೊಂಡಿದ್ದೇನೆ. ಇದರೊಂದಿಗೆ ನಗರಕ್ಕೂ ಭಯೋತ್ಪಾದಕ ಚಟುವಟಿಕೆಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಸಾಬೀತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
(ಯುಎನ್ಐ)
Comments
Story first published: Sunday, July 29, 2007, 5:30 [IST]