ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚೀನಾದಲ್ಲಿ ಸಂಶೋಧನೆ : ಧಾರವಾಡದ ಉಪನ್ಯಾಸಕ ಆಯ್ಕೆ
ಧಾರವಾಡ, ಜುಲೈ 29 : ಭಾರತೀಯ ಸಾಮಾಜಿಕ ಸಂಶೋಧನಾ ಮಂಡಳಿ(ಐಸಿಎಸ್ಎಸ್ಆರ್), ಚೀನಾದಲ್ಲಿ ಸಂಶೋಧನೆ ನಡೆಸಲು ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕ ಡಾ.ಆರ್.ಆರ್.ಬಿರಾದಾರ್ ಅವರನ್ನು ಆಯ್ಕೆ ಮಾಡಿದೆ.
ಮಾನವ ಅಭಿವೃದ್ಧಿ, ಬಡತನ ಮತ್ತು ಅಸಮಾನತೆ : ಭಾರತ ಮತ್ತು ಚೀನಾದಲ್ಲಿ ಒಂದು ತುಲನಾತ್ಮಕ ಅಧ್ಯಯನ ಎಂಬ ವಿಷಯದ ಮೇಲೆ ಅವರು ಸಂಶೋಧನೆ ನಡೆಸಲಿದ್ದಾರೆ.
ಚೀನಾ ಸಾಮಾಜಿಕ ವಿಜ್ಞಾನಗಳ ಅಕಾಡೆಮಿ(ಸಿಎಎಸ್ಎಸ್) ಸಹಾಯದಿಂದ, ಒಂದು ತಿಂಗಳು ಕಾಲ ಅವರು ಈ ಸಂಶೋಧನಾ ಅಧ್ಯಯನ ಕೈಗೊಳ್ಳಲಿದ್ದಾರೆ.
(ಏಜನ್ಸೀಸ್)
Comments
Story first published: Sunday, July 29, 2007, 5:30 [IST]