ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಟೆಸ್ಟ್ ಕ್ರಿಕೆಟ್ :ಮಳೆ ಕೃಪೆ ,ಸೋಲಿನಿಂದ ಭಾರತ ಪಾರು
ಲಂಡನ್, ಜುಲೈ 24 : ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಅಂತಿಮ ದಿನ, ಮಳೆಯ ಕಾರಣ ಆಟ ನಿಂತದ್ದರಿಂದ 9 ವಿಕೆಟ್ ಕಳೆದುಕೊಂಡು 282 ರನ್ ಮಾಡಿದ್ದ ಭಾರತ ತಂಡ ನಿಟ್ಟುಸಿರುಬಿಟ್ಟಿತು.
ಭಾರತ ಗೆಲ್ಲಲು ಇನ್ನೂ 98 ರನ್ ಬಾಕಿಯಿತ್ತು.ಇಂಗ್ಲೆಂಡ್ ಗೆ ಗೆಲ್ಲಲು 1 ವಿಕೆಟ್ ಸಾಕಿತ್ತು.ಧೋನಿ(76) ಹಾಗೂ ಶ್ರೀ ಶಾಂತ್ (4) ಅಜೇಯರಾಗಿ ಉಳಿದು ಭಾರತದ ಮಾನ ಕಾಪಾಡಲು ಹೆಣಗುತ್ತಿರುವಾಗ, ಲಾರ್ಡ್ಸ್ ನಲ್ಲಿ ಬಿದ್ದ ಮಳೆ ವರದಾನವಾಯಿತು. ಪಂದ್ಯ ಡ್ರಾ ಎಂದು ಘೋಷಿಸಲಾಯಿತು.
ಆಕರ್ಷಕ ಶತಕ (137 ರನ್ )ಸಿಡಿಸಿದ ಕೆವಿನ್ ಪೀಟರ್ ಸನ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಳಿಸಿದರು.ಟೆಸ್ಟ್ ಸರಣಿಯಲ್ಲಿ ಇನ್ನು ಎರಡು ಪಂದ್ಯಗಳು ಬಾಕಿಯಿದೆ.
(ಏಜನ್ಸೀಸ್)
Comments
Story first published: Tuesday, July 24, 2007, 5:30 [IST]