ಭಾರತದಲ್ಲಿ ಹಾವುಗಳಿವೆ ಎಚ್ಚರಿಕೆ!ಅವು ಕಚ್ಚುತ್ತವೆ ಎಚ್ಚರಿಕೆ!
ಹಾವುಗಳಿವೆ ಎಚ್ಚರಿಕೆ! ಇಂತಹ ನಾಮಫಲಕ ಹಾಕುವ ಸ್ಥಿತಿ ಭಾರತದಲ್ಲಿದೆ! ಜಗತ್ತಿನಲ್ಲಿಯೇ ಅತಿ ಹೆಚ್ಚು ಜನ ಹಾವು ಕಡಿತಕ್ಕೆ ಭಾರತದಲ್ಲಿ ಗುರಿಯಾಗುತ್ತಿದ್ದಾರೆ.
ಪ್ರತಿವರ್ಷ 2.5ಲಕ್ಷಕ್ಕೂ ಅಧಿಕ ಮಂದಿ ಹಾವು ಕಡಿತಕ್ಕೆ ಗುರಿಯಾಗಿದ್ದು, ಇವರ ಪೈಕಿ 50ಸಾವಿರ ಜನ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂಬುದು ಒಂದು ಅಂದಾಜು.
ಆಸ್ತಿಕರೇ, ಯಾವುದಕ್ಕೂ ಒಂದು ಸಲ ನಾಗಪ್ಪನಿಗೆ ಇನ್ನೊಂದು ನಮಸ್ಕಾರ ಹಾಕಿ ಬಿಡಿ!
***
ಧೂಮಪಾನ
ಸಾರಾಯಿ ಜೊತೆಗೆ ಬಿಯರ್, ವಿಸ್ಕಿ ಸೇರಿದಂತೆ ಇನ್ನಿತರ ಮದ್ಯ ನಿಷೇಧಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸುತ್ತಿದೆ. ಆ ಮೂಲಕ ಮದ್ಯರಹಿತ ರಾಜ್ಯವಾಗುವ ಹಂಬಲ ಒಳ್ಳೆಯದು.
ಇತ್ತ ಕೇಂದ್ರಾಡಳಿತ ಪ್ರದೇಶವಾಗಿರುವ ಚಂಡೀಗಢ, ಧೂಮಪಾನವನ್ನು ನಿಷೇಧಿಸಿದೆ.
ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ಕಷ್ಟಪಟ್ಟು ಎಂಬಿಬಿಎಸ್ ಓದಿದ ಡಾಕ್ಟರ್ಗಳು, ನಿರುದ್ಯೋಗಿಗಳಾಗುವುದು ಖಚಿತ. ಆದರೆ ಇದೆಲ್ಲಾ ಆಗೋದಿಲ್ಲ ಬಿಡಿ. ಒಳ್ಳೆ ಬುದ್ಧಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹರಡೋದಿಲ್ಲ. ಹರಡೋಕೆ ಅದೇನು ಏಡ್ಸ್ ವೈರಸ್ಸೇ?