ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಾಮರಾಜನಗರ : ಸ್ಫೋಟಕ್ಕೆ 6 ಗಣಿ ಕಾರ್ಮಿಕರು ಬಲಿ
ಚಾಮರಾಜನಗರ : ಸ್ಫೋಟವೊಂದರಲ್ಲಿ 6ಮಂದಿ ಗಣಿ ಕಾರ್ಮಿಕರು ಸಾವನ್ನಪ್ಪಿರುವ ದುರಂತ, ಚಾಮರಾಜನಗರಕ್ಕೆ 20ಕಿ.ಮೀ ದೂರದಲ್ಲಿರುವ ಕುತಲವಾಡಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಸ್ಫೋಟ ಸಂಭವಿಸಿದಾಗ ಉಗ್ರಾಣ ಕೊಠಡಿಯಲ್ಲಿ ಕಾರ್ಮಿಕರು ಮಲಗಿದ್ದರು. ಸ್ಫೋಟದ ಪರಿಣಾಮ ಐವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಆರನೇ ವ್ಯಕ್ತಿ, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ. ಸ್ಫೋಟಕ್ಕೆ ನಿಖರ ಕಾರಣ ಈವರೆಗೆ ತಿಳಿದು ಬಂದಿಲ್ಲ. ಜಿಲ್ಲಾಡಳಿತ ಸ್ಥಳಕ್ಕೆ ತೆರಳಿ, ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಮತ್ತೊಂದು ಕಡೆ, ಇದೇ ಹಾದಿಯಲ್ಲಿ ಬರುತ್ತಿದ್ದ ಚಾಮರಾಜನಗರ ತಹಸೀಲ್ದಾರ್ ಪುಟ್ಟರಾಜು ಅವರ ಜೀಪು ಅಪಘಾತಕ್ಕೆ ಗುರಿಯಾಗಿದೆ. ಆಸ್ಪತ್ರೆಯಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
(ಯುಎನ್ಐ)
Comments
Story first published: Monday, July 16, 2007, 5:30 [IST]