ಇವರಿಗೆ ಕನ್ನಡ ಲಿಪಿಗಿಂತ ದೇವನಾಗರಿ ಲಿಪಿಯೇ ಬೇಕಂತೆ!
ಮಂಗಳೂರು,ಜುಲೈ16:ಸ್ವಂತ ಲಿಪಿ ಹೊಂದಿರದ ಕೊಂಕಣಿ ಭಾಷೆ ಕಲಿಸಲು, ಕನ್ನಡ ಲಿಪಿ ಹಾಗೂ ದೇವನಾಗರಿ ಲಿಪಿ ಬಳಕೆ ಬಗ್ಗೆ ಇದ್ದ ಗೊಂದಲಕ್ಕೆ ತೆರೆಬಿದ್ದಿದೆ .
ನೊಂದಾಯಿತ 5,000 ಶಾಲಾ ವಿದ್ಯಾರ್ಥಿಗಳಲ್ಲಿ ಸುಮಾರು 2,200ವಿದ್ಯಾರ್ಥಿಗಳು ದೇವನಾಗರಿ ಲಿಪಿಯನ್ನು ಆಯ್ಕೆ ಮಾಡಿಕೊಂಡು ಸಮಸ್ಯೆ ಬಗೆಹರಿಸಿದ್ದಾರೆ! ಅಂದರೆ ಇವರು,ಕನ್ನಡ ಲಿಪಿ ಮುಖಾಂತರ ಇನ್ನು ಕೊಂಕಣಿ ಓದುವುದಿಲ್ಲ!
ಮಾಧ್ಯಮಿಕ ಹಾಗೂಪ್ರೌಢಶಾಲೆಗಳಲ್ಲಿ ಕೊಂಕಣಿಯನ್ನು 3ನೇ ಐಚ್ಛಿಕ ಭಾಷೆಯಾಗಿ ಪಠ್ಯಕ್ರಮದಲ್ಲಿ ಸೇರಿಸಲು ಸರ್ಕಾರ ಅನುಮೋದನೆ ನೀಡಿದ್ದರೂ, ಕೊಂಕಣಿ ಪಠ್ಯ ಪುಸ್ತಕಗಳ ಮುದ್ರಣ, ಶಿಕ್ಷಕರಿಗೆ ತರಬೇತಿಯ ಖರ್ಚು- ವೆಚ್ಚವನ್ನು ಆಯಾ ಶಾಲೆಗಳೇ ಭರಿಸಬೇಕಾಗಿದೆ.
ದೇವನಾಗರಿ ಲಿಪಿ ಬಳಸಿ ತಯಾರಿಸಿದ ಕೊಂಕಣಿ ಭಾಷೆಯ ಪಠ್ಯ ಪುಸ್ತಕಗಳನ್ನು ಡಿಎಸ್ ಇಆರ್ ಟಿ ನೆರವು ನೀಡುತ್ತಿದೆ. ಮೊದಲ ಪ್ರತಿಯನ್ನು ಇತ್ತೀಚೆಗೆ ಮಂಗಳೂರಿನ ನಲಂದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅನಾವರಣಗೊಳಿಸಲಾಯಿತು ಎಂದು ಕೊಂಕಣಿ ಅಲ್ಪ ಸಂಖ್ಯಾತ ಭಾಷಾ ಶಾಲಾ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿ ಡಾ. ಕೆ .ಮೋಹನ್ ಪೈ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)