ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಗಲೂರ್ ಅನ್ನುವ ಕರ್ಮ ತಪ್ಪಿಸಲು ಕೇಂದ್ರದ ಸಮ್ಮತಿ!

By Staff
|
Google Oneindia Kannada News

ಬೆಂಗಳೂರು, ಜುಲೈ 14 : ನಗರಗಳ ಕಲಬೆರಕೆ ಹೆಸರುಗಳನ್ನು ಕನ್ನಡೀಕರಣದ ಮೂಲಕ ಶುದ್ಧಗೊಳಿಸುವ ಕಾರ್ಯ ಇನ್ನು ಸುಗಮ. ರಾಜ್ಯದ 13ನಗರಗಳ ಹೆಸರನ್ನು ಕನ್ನಡೀಕರಣ ಮಾಡಲು ಕೇಂದ್ರ ಸರ್ಕಾರ ಸಮ್ಮಿತಿಸಿದೆ.

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್, ಕೇಂದ್ರದ ಸಮ್ಮತಿಯಿಂದಾಗಿ ಇನ್ನು ಯಾವುದೇ ಗೊಂದಲಗಳಿಲ್ಲ. ಮುಂದಿನ ಸಚಿವ ಸಭೆಯಲ್ಲಿ ಕನ್ನಡೀಕರಣಕ್ಕೆ ಅನುಮತಿ ಪಡೆದು, ಸರ್ಕಾರ ಅಧಿಸೂಚನೆ ಹೊರಡಿಸಲಿದೆ ಎಂದರು.

ಬೆಂಗಳೂರು(ಬ್ಯಾಂಗಲೂರ್), ಮೈಸೂರು(ಮೈಸೂರ್), ಹೊಸಪೇಟೆ(ಹಾಸ್‌ಪೇಟ್), ಹುಬ್ಬಳ್ಳಿ(ಹುಬ್ಳಿ), ಶಿವಮೊಗ್ಗ(ಶಿಮೊಗ್ಗ), ಮಂಗಳೂರು(ಮಂಗ್ಲೂರ್), ಬೆಳಗಾವಿ(ಬೆಳಗಾಂ), ಕಲಬುರ್ಗಿ(ಗುಲ್ಬರ್ಗ), ತುಮಕೂರು(ತುಮ್ಕೂರು), ಚಿಕ್ಕಮಗಳೂರು(ಚಿಕ್ಮಂಗಳೂರ್), ಬಳ್ಳಾರಿ(ಬೆಳ್ಳಾರಿ), ಕಾಪು(ಕೋಪು), ವಿಜಾಪುರ(ಬಿಜಾಪುರ) ಹೀಗೆ ಆವರಣದಲ್ಲಿರುವ ಅಶುದ್ಧ ರೂಪಗಳನ್ನು ರಾಜ್ಯದ 13ನಗರಗಳು ಕಳೆದುಕೊಳ್ಳಲಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X