ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಗಿಹೋದ ಹಿರಿಯರು : ಕಡಿದಾಳ್ ಮಂಜಪ್ಪ ನೂರು
ಬೆಂಗಳೂರು, ಜುಲೈ 11: ಸ್ವಾತಂತ್ರ್ಯ ಹೋರಾಟ, ಸರಳ ಜೀವನ ಹಾಗೂ ಉದಾತ್ತ ಮೌಲ್ಯಗಳಿಗೆ ಹೆಸರಾದ ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪನವರ ಶತಮಾನೋತ್ಸವ ವರ್ಷವಿದು.
ಈ ನಿಮಿತ್ತ ಏರ್ಪಡಿಸಲಾಗಿರುವ ಸಮಾರಂಭದ ಉದ್ಘಾಟನೆ ಸಮಾರಂಭವು ಜುಲೈ 17 ರಂದು ಸಂಜೆ 6.೦೦ ಗಂಟೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಆರವಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಜೆ.ಸಿ. ರಸ್ತೆಯಲ್ಲಿರುವ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಜುಲೈ 13 ನೆ ತಾರೀಖು ಜರುಗುವಂತೆ ಏರ್ಪಾಟಾಗಿತ್ತು. ಆದರೆ, ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ನಿಧನದಿಂದಾಗಿ ಕಾರ್ಯಕ್ರಮವನ್ನು 17 ಕ್ಕೆ ಮುಂದೂಡಲಾಯಿತು.
ಮಂಜಪ್ಪನವರ ಶತಮಾನೋತ್ಸವ ಅಂಗವಾಗಿ ವಿವಿಧ ಸಾಹಿತ್ಯಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅವರ ಜೀವನ ಮತ್ತು ಕರ್ನಾಟಕಕ್ಕೆ ಕೊಡುಗೆಯನ್ನು ಬಿಂಬಿಸುವ ಚಿತ್ರಸಂಪುಟವನ್ನು ಹೊರತರಲಾಗುತ್ತಿದೆ.
Comments
Story first published: Wednesday, July 11, 2007, 5:30 [IST]