ಕಫೀಲ್ ಅಸಲಿ ಬಣ್ಣ ಇದೀಗ ಇನ್ನಷ್ಟು ಸ್ಪಷ್ಟ :ಗೃಹ ಸಚಿವ
ಬೆಂಗಳೂರು :ಗ್ಲಾಸ್ಗೋ ವಿಮಾನ ನಿಲ್ದಾಣ ಸ್ಫೋಟಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ, ಕಫೀಲ್ ಅಹ್ಮದ್ ಭಾಗಿಯಾದ ಬಗ್ಗೆ ಸ್ಪಷ್ಟವಾಗುತ್ತಿದೆ ಎಂದು ಗೃಹ ಸಚಿವ ಎಂ.ಪಿ.ಪ್ರಕಾಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪೊಲೀಸರಿಗೆ ದೊರೆತ ವ್ಯಾಪಕ ಮಾಹಿತಿ ಪ್ರಕಾರ ಕಫೀಲ್ ನಿಸ್ಸಂದೇಹವಾಗಿ ದಾಳಿಕೋರ ಎಂಬುದು ಗೊತ್ತಾಗುತ್ತದೆ.
ಪೊಲೀಸರು ಸಂಗ್ರಹಿಸಿದ ಮಾಹಿತಿಯನ್ನು ಯಾರು ನೋಡಿದರೂ, ಆತ ವಿಮಾನ ನಿಲ್ದಾಣ ದಾಳಿಯಲ್ಲಿ ಭಾಗಿಯಾಗಿದ್ದಾನೆ ಎಂದು ನಂಬುತ್ತಾರೆ. ಹಾದಿ ಬೀದಿಯ ಪುಂಡಪೋಕರಿಗಳಿಗಿಂತ, ದುರ್ಮಾರ್ಗ ಹಿಡಿಯುವ ಇಂತಹ ಕಲಿತ ಜನರು ಇನ್ನೂ ಕೆಟ್ಟವರು ಎಂದು ಅವರು ಅಭಿಪ್ರಾಯಪಟ್ಟರು.
ಅಚ್ಯುತರಾವ್ ಉವಾಚ : ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ನೀಲಂ ಅಚ್ಯುತರಾವ್, ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾರನ್ನೂ ಬಂಧಿಸಿಲ್ಲ. ಆದರೆ ತನಿಖೆ ವ್ಯಾಪಕಗೊಂಡಿದೆ ಎಂದು ತಿಳಿಸಿದರು.
ಇಂಗ್ಲೆಂಡ್ಗೆ ಹೋಗುವ ಮುನ್ನ ಕಫೀಲ್ ಹೊಂದಿದ್ದ ಸಂಪರ್ಕಗಳ ಕುರಿತು ಸಹ ತನಿಖೆ ನಡೆದಿದೆ. ಪೊಲೀಸರು, ಕಫೀಲ್ ಮನೆಯಿಂದ ವಶಪಡಿಸಿಕೊಳ್ಳಲಾಗಿರುವ ಉನ್ನತ ಸಾಮರ್ಥ್ಯದ ಕಂಪ್ಯೂಟರ್ ಹಾರ್ಡ್ ಡಿಸ್ಕ್ನ ಅಧ್ಯಯನ ನಡೆಸುತ್ತಿದ್ದಾರೆ ಎಂದು ವಿವರಿಸಿದರು.
(ಯುಎನ್ಐ)