ಚಂದ್ರಶೇಖರ್ ನಿಧನ : ಶಾಲಾಕಾಲೇಜು, ಕಚೇರಿಗೆ ರಜೆ
ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದ ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.
ಕೇಂದ್ರ ಸರ್ಕಾರ ಅಧಿಕೃತವಾಗಿ ರಜೆ ಘೋಷಿಸದ ಕಾರಣ, ರಾಜ್ಯದಲ್ಲಿನ ಕೇಂದ್ರೀಯ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳು ಗೊಂದಲದಲ್ಲಿವೆ. ರಜೆ ಪರಿಣಾಮ ಬೆಂಗಳೂರಿನ ರಸ್ತೆಗಳಲ್ಲಿ ಸೋಮವಾರ ಬೆಳಗ್ಗೆ ಟ್ರಾಫಿಕ್ ಕಿರಿಕಿರಿ ಅಷ್ಟೇನು ಇರಲಿಲ್ಲ.
ಕರಾವಳಿರತ್ನ ಪ್ರಶಸ್ತಿ ಪ್ರದಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳಿಗೆ ದಕ್ಷಿಣ ಕನ್ನಡಿಗರ ಸಂಘ ಭಾನುವಾರ ಕರಾವಳಿರತ್ನ ಪ್ರಶಸ್ತಿ ಪ್ರದಾನ ಮಾಡಿದೆ.
ಹರಿಕಥಾ ವಾಚಕ ಭದ್ರಗಿರಿ ಅಚ್ಯುತದಾಸ್, ಚಿತ್ರನಟಿ ಲೀಲಾವತಿ, ಲೇಖಕಿ ಉಷಾ.ಪಿ.ರೈ ಮತ್ತು ಯಕ್ಷಗಾನ ಭಾಗವತ ಸುಬ್ರಮಣ್ಯ ಧಾರೇಶ್ವರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳು ಬೇಕಾಗಿದ್ದಾರೆ...
ಮೈಸೂರು ನಗರದ65 ವಾರ್ಡ್ಗಳಲ್ಲೂ ನೀರು ಸಂರಕ್ಷಣಾ ಜಾಗೃತಿ ಕಾರ್ಯಕ್ರಮನಡೆಯಲಿದೆ.
ಕಾರ್ಯಕ್ರಮದಲ್ಲಿಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡುವ ಆಸಕ್ತಿಯುಳ್ಳವರು, ಜುಲೈ 15ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ವಿವರಗಳಿಗೆ ಕಾವೇರಿ ನೀರಾವರಿ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಡಿ.ರವಿಕುಮಾರ್ ಅವರನ್ನು ಸಂಪರ್ಕಿಸಬಹುದು.
ದೂರವಾಣಿ ಸಂಖ್ಯೆ :6554955.