ವಲ್ಲೀಶ ಶಾಸ್ತ್ರಿ, ಡುಂಡಿರಾಜ್ಗೆ ನಾಟಕ ಅಕಾಡೆಮಿ ಪ್ರಶಸ್ತಿ
ಬೆಂಗಳೂರು : ಅಮೆರಿಕಾದ ವಲ್ಲೀಶ ಶಾಸ್ತ್ರಿ, ಹನಿಗವಿ ಡುಂಡಿರಾಜ್, ಪತ್ರಕರ್ತ ಎಂ.ಕೆ.ಭಾಸ್ಕರರಾವ್ ಸೇರಿದಂತೆ ವಿವಿಧ ಗಣ್ಯರಿಗೆ 2006,07ನೇ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿಗಳು ಸಂದಿವೆ.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ ಜೆ.ಕಪ್ಪಣ್ಣ , ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಿದರು.
ಬಳ್ಳಾರಿಯ ಅಂಧ ಕಲಾವಿದ ರಂಗಕರ್ಮಿ ದೇವೇಂದ್ರ ರೆಡ್ಡಿ ನಂದಿಪುರ ಸೇರಿದಂತೆ 15ಮಂದಿಯನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಂಡ್ಯದ ದೊಡ್ಡ ಅಂಕಾಚಾರ್, ಬೆಂಗಳೂರಿನ ಡಿ.ಕೆ.ಶಿಂಧೆ, ಬೆಳಗಾವಿಯ ಲಿಂಗಯ್ಯ ವೀರಭದ್ರಯ್ಯ ಕುಲಕರ್ಣಿ ಮತ್ತಿತರರು ಪಟ್ಟಿಯಲ್ಲಿದ್ದಾರೆ.
ಅಕಾಡೆಮಿಯ ಗೌರವ ಪ್ರಶಸ್ತಿಗೆ ದುಂಡೀರಾಜ್, ಕೆ.ಹಿರಣ್ಣಯ್ಯ ಪುರಸ್ಕಾರಕ್ಕೆ ಬೆಂಗಳೂರಿ ನ ಪ್ರಭಾತ್ ಕಲಾವಿದರು, ರಂಗ ವಿಮರ್ಶೆಗಾಗಿ ಪತ್ರಕರ್ತ ಎ ಎಂ.ಕೆ.ಭಾಸ್ಕರರಾವ್, ಹುಣಸವಾಡಿ ರಾಜನ್ ಆಯ್ಕೆಯಾಗಿದ್ದಾರೆ.
ಸುವರ್ಣ ಕರ್ನಾಟಕ ಆಚರಣೆ ಸಂದರ್ಭದಲ್ಲಿ ಅನಿವಾಸಿಗಳಿಗೆ ಸುವರ್ಣ ಕರ್ನಾಟಕ ಪುರಸ್ಕಾರವನ್ನು ಅಕಾಡೆಮಿ ಪ್ರಕಟಿಸಿದೆ. ಅಮೆರಿಕದ ವಲ್ಲೀಶ ಶಾಸ್ತ್ರಿ , ಪ್ರೊ. ಶ್ರೀಕಂಠಯ್ಯ, ಆಸ್ಟ್ರೇಲಿಯಾದ ಸುದರ್ಶನ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮೂಡಬಿದಿರೆಯಲ್ಲಿ ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ನಡೆವ 5ದಿನಗಳ ನಾಟಕೋತ್ಸವದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ.
(ದಟ್ಸ್ ಕನ್ನಡವಾರ್ತೆ )