ಬೆಂಗಳೂರು ವಿವಿಯ ನಿರ್ದೇಶಕಬಿ.ಸಿ.ಮೈಲಾರಪ್ಪ ಅಮಾನತು
ಬೆಂಗಳೂರು : ಹಲವು ಹಗರಣಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಬೆಂಗಳೂರು ವಿಶ್ವವಿದ್ಯಾಲಯ ದೂರ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಬಿ.ಸಿ.ಮೈಲಾರಪ್ಪ ಅವರನ್ನು ಅಮಾನತು ಮಾಡಲಾಗಿದೆ.
ಮೈಲಾರಪ್ಪ ರವರ ಮೇಲಿನ ಆರೋಪಗಳ ಕುರಿತ ಸಮಗ್ರ ತನಿಖೆಯನ್ನು ನಡೆಸಲು ಸಿಓಡಿಯನ್ನು ಕೇಳಲಾಗಿದೆ ಎಂದು ಸೆಂಟ್ರೆಲ್ ಕಾಲೇಜಿನ ಆವರಣದಲ್ಲಿ ಶನಿವಾರ ನಡೆದ ಮಹತ್ವದ ಸಭೆಯಲ್ಲಿ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಹೇಳಿದ್ದಾರೆ.
ಆರೋಪಗಳ ವಿವರ:
ಹೊರರಾಜ್ಯ ಹಾಗೂ ಹೊರ ದೇಶಗಳಲ್ಲಿ ಬೆಂಗಳೂರು ವಿವಿಯ ದೂರ ಶಿಕ್ಷಣದಡಿ ಕೆಲವು ದೂರ ಸಂಪರ್ಕ ಕೇಂದ್ರಗಳನ್ನು ಆರಂಭಿಸಲು ಅರ್ಜಿಗಳು ಬಂದ್ ಹಿನ್ನೆಲೆಯಲ್ಲಿ ಮೈಲಾರಪ್ಪ ನವರು ವಿವಿಯ ವತಿಯಿಂದ ಕೊಲೊಂಬೊ ಹಾಗೂ ದುಬೈ ಪ್ರವಾಸ ಮಾಡಿದ್ದರು.ಈ ಸಂಬಂಧವಾಗಿ ವಿವಿಗೆ ನೀಡಿರುವ ಖರ್ಚು-ವೆಚ್ಚಗಳ ರಸೀದಿ ಸಮರ್ಪಕವಾಗಿಲ್ಲ ಎಂಬ ಆರೋಪವಿದೆ,
ದೂರಸಂಪರ್ಕ ಶಿಕ್ಷಣದ ತರಗತಿಗಳನ್ನು ನಡೆಸುವಲ್ಲಿ ವ್ಯತ್ಯಯ. ಹಾಗೂ ನಕಲಿ ಪಿಎಚ್ ಡಿ ಪ್ರಬಂಧ ಮಾಡುವವರಿಗೆ ಮಾರ್ಗದರ್ಶಕರಾಗಿದ್ದರು ಎಂದು ತಿಳಿದುಬಂದಿದೆ.
(ದಟ್ಸ್ ಕನ್ನಡ ವಾರ್ತೆ)