ಶುಕ್ರವಾರದೊಳಗೆ ಮತ ಚಲಾಯಿಸಿ ತಾಜ್ಮಹಲ್ ಗೆಲ್ಲಿಸಿ!
ಋತುಗಳು
ಬಂದು
ಹೋಗುತಿದೆ
ಪ್ರೀತಿಯ
ಗುರುತು
ಮಾತ್ರ
ಉಳಿದಿದೆ...
ಈ ಮೇಲ್ಕಂಡ ಸಾಲುಗಳನ್ನು ನಮ್ಮ ಪ್ರೇಮ ಕವಿ ಕೆ.ಕಲ್ಯಾಣ್ ಅಲ್ಲದೇ ಬೇರೆ ಯಾರು ಬರೆಯಲು ಸಾಧ್ಯ? ತಾಜ್ ಮಹಲನ್ನು ವಿಶ್ವದ ಹೊಸ ಏಳು ಅದ್ಭುತಗಳ ಪಟ್ಟಿಗೆ ಸೇರಿಸಲು ಖ್ಯಾತ ಸಂಗೀತಗಾರ ಎ.ಆರ್. ರೆಹಮಾನ್ ಸರ್ವ ಪ್ರಯತ್ನ ನಡೆಸಿದ್ದಾರೆ. ಅವರ ಪ್ರಯತ್ನಕ್ಕೆ ಕೈ ಸೇರಿಸಿರುವ ಕಲ್ಯಾಣ್, ತಾಜ್ ಬಗ್ಗೆ ಪ್ರೇಮಪೂರಿತ ಸಾಲುಗಳನ್ನು ಬರೆದಿದ್ದಾರೆ.
ಇಡೀ ಹಾಡಿನಲ್ಲಿ ತಾಜ್ ಎಂಬ ಹೆಸರು ಬಳಸದೆ ಕವನ ರಚನೆ ಮಾಡಿರುವುದು ವಿಶೇಷ ಎಂದು ಸಾಹಿತಿ ಕೆ. ಕಲ್ಯಾಣ್ ಹೇಳಿದ್ದಾರೆ. ಇನ್ನೂ ತಾಜ್ ಮಹಲ್ ನೋಡಿಲ್ಲ, ನನ್ನ ಮಡದಿಯ ಜತೆ ಹೋಗುವ ಇರಾದೆ ಇದೆ. ತಾಜ್ ಮಹಲ್ಗೆ ವೋಟ್ ಮಾಡಿ ಗೆಲ್ಲಿಸಿ ಎಂಬುದು ಕಲ್ಯಾಣ್ ಮನವಿ.
ಎಲ್ಲಾ ಪ್ರಮುಖ ಭಾಷೆಗಳಲ್ಲಿ ಬರುತ್ತಿರುವ ಈ ಗೀತೆಗಳ ರಾಗ ಸಂಯೋಜನೆ ಎ.ಆರ್ ರೆಹಮಾನ್ ಸ್ಟುಡಿಯೋದಲ್ಲಿ ಮಾಡಲಾಗಿದೆ.. ತಾಜ್ಗೆ ಮತನೀಡಿ ಎಂಬ ಸಂದೇಶದೊಂದಿಗೆ ಹಾಡುಗಳು ಮೂಡಿಬಂದಿವೆ.
*ತಾಜ್ ಮಹಲ್ಗೆ ಓಟ್ ಮಾಡಲು ಭೇಟಿ ನೀಡಿ : http://www.new7wonders.com/index.php?id=351
*TAJ ಎಂದು ಟೈಪ್ ಮಾಡಿ 4567ಕ್ಕೆ ಶುಕ್ರವಾರದೊಳಗೆ ಕಳಿಸಿ
(ಜಿಎಸ್ಎಂ ಮೊಬೈಲ್ಗೆ 3 ರೂ .ದರ ಹಾಗೂ ಬಿಎಸ್ಎನ್ಎಲ್ ಪ್ರೀಪೇಯ್ಡ್ ದರ 80 ಪೈಸೆ)
ಪೂರಕ ಓದಿಗೆ : ರೆಹಮಾನ್ ಮ್ಯಾಜಿಕ್ : ತಾಜ್ ನಂ.1 ವಂಡರ್ ಆಗುವುದೇ?