ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತೆಲಗಿ ಉಪ್ಪು ತಿಂದು,ನೀರು ಕುಡಿದ ಕತೆ !:750ಪುಟ ರೆಡಿ!
ಮುಂಬಯಿ :ಉಪ್ಪು ತಿಂದಮೇಲೆ ನೀರು ಕುಡಿಯಲೇ ಬೇಕು ಅನ್ನುವುದನ್ನು ಅಬ್ದುಲ್ ಕಲಾಂ ತೆಲಗಿ ಅರ್ಥಮಾಡಿಕೊಂಡಿದ್ದಾನೆ. ಉಪ್ಪು ತಿಂದದಿನಗಳನ್ನು ಮತ್ತು ನೀರು ಕುಡಿದ ದಿನಗಳನ್ನು ತನ್ನ ಆತ್ಮಕತೆಯಲ್ಲಿ ಹೇಳಿಕೊಳ್ಳಲು ತೆಲಗಿ ಮುಂದಾಗಿದ್ದಾನೆ.
ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ರೂವಾರಿ ತೆಲಗಿ ಜೈಲಲ್ಲಿದ್ದು, ತನ್ನ ಆತ್ಮ ಕತೆ ಪುಸ್ತಕದ 750ಪುಟಗಳನ್ನು ಈಗಾಗಲೇ ಮುಗಿಸಿದ್ದಾನೆ. ಸದ್ಯದಲ್ಲಿಯೇ ಪುಸ್ತಕವನ್ನು ಬಿಡುಗಡೆ ಮಾಡುವ ಉತ್ಸಾಹ ತೆಲಗಿಯಲ್ಲಿದೆ.
ತೆಲಗಿ ಬಾಲ್ಯದಿಂದ ಹಿಡಿದು ನಕಲಿ ಛಾಪಾ ಕಾಗದ ಹಗರಣ ರೂಪುಗೊಂಡ ಬಗೆಯನ್ನು ಪುಸ್ತಕದಲ್ಲಿ ವಿವರಿಸಿದ್ದು, ಆತನಿಕೆ ಒಳ್ಳೆ ಪ್ರಕಾಶಕರೊಬ್ಬರು ಬೇಕಂತೆ. ಆಸಕ್ತರು ಪ್ರಯತ್ನಿಸಬಹುದು!
(ಏಜನ್ಸೀಸ್)
Comments
Story first published: Thursday, July 5, 2007, 5:30 [IST]