ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಂಜಯಗಾಂಧಿ ಆಸ್ಪತ್ರೆಗೀಗ ಹೊಸ ಹೆಸರು...ಹೊಸ ಸೇವೆ
ಬೆಂಗಳೂರು : ನಗರದ ಸಂಜಯಗಾಂಧಿ ಅಪಘಾತ ಆಸ್ರತ್ರೆ ಮತ್ತು ಸಂಶೋಧನಾ ಸಂಸ್ಥೆಯ ಹೆಸರು ಬದಲಾಗಿದೆ. ಈ ಆಸ್ಪತ್ರೆಗೆ ಸಂಜಯಗಾಂಧಿ ತುರ್ತು ನಿಗಾ ಹಾಗೂ ಮೂಳೆ ಚಿಕಿತ್ಸಾ ಆಸ್ಪತ್ರೆಎಂದು ಮರುನಾಮಕರಣ ಮಾಡಲಾಗಿದೆ.
ಈ ಆಸ್ಪತ್ರೆಯಲ್ಲಿ ಇನ್ನುಮುಂದೆ ಅಪಘಾತಗಳಿಗೆ ಮಾತ್ರವಲ್ಲದೇ, ಮೂಳೆ ತೊಂದರೆಗಳಿಗೂ ಚಿಕಿತ್ಸೆ ದೊರೆಯಲಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಸಭೆ ನಂತರ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಆಸ್ಪತ್ರೆಗೆ ಪೂರಕವಾಗಿ ಪೊಲೀಸ್ ಮತ್ತು ಕಾನೂನು ಘಟಕಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಅಗತ್ಯ ಮೂಲ ಸೌಕರ್ಯಗಳನ್ನು ಆಸ್ಪತ್ರೆಗೆ ಸದ್ಯದಲ್ಲಿಯೇ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, July 3, 2007, 5:30 [IST]