ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಾಂಧೀಜಿ ಪತ್ರದ ಹರಾಜು ಪ್ರಕ್ರಿಯೆ ರದ್ದು : ಕ್ರಿಸ್ಟಿ ಸಂಸ್ಥೆ
ಲಂಡನ್ : ಮಹಾತ್ಮ ಗಾಂಧಿ ಅವರ ಪತ್ರವನ್ನು ಹರಾಜು ಹಾಕುವ ಪ್ರಕ್ರಿಯೆಯನ್ನು ಕ್ರಿಸ್ಟಿ ಸಂಸ್ಥೆ ನಿಲ್ಲಿಸಿದೆ.
ತಮ್ಮ ಹತ್ಯೆಗೂ ಮುನ್ನ 19ದಿನಗಳ ಹಿಂದೆ, ಹರಿಜನ ಪತ್ರಿಕೆಗಾಗಿ ಗಾಂಧಿ ಬರೆದಿದ್ದ ಪತ್ರವನ್ನು ಮಂಗಳವಾರ ಹರಾಜು ಹಾಕಲು ಸಂಸ್ಥೆ ಮುಂದಾಗಿತ್ತು.
ಪತ್ರದ ಹರಾಜನ್ನು ತಪ್ಪಿಸಬೇಕು ಎಂದು ಗಾಂಧಿವಾದಿಗಳು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ಹೈಕಮೀಷನ್, ಕ್ರಿಸ್ಟಿ ಸಂಸ್ಥೆ ಜೊತೆ ಮಾತುಕತೆ ನಡೆಸಿತ್ತು. ಈ ಪತ್ರಕ್ಕಾಗಿ 4.95ಲಕ್ಷ ರೂ.ನಿಂದ 6.60ಲಕ್ಷ ರೂ.ವರೆಗೆ ಬೆಲೆಯನ್ನು ಸಂಸ್ಥೆ ನಿಗದಿಪಡಿಸಿತ್ತು.
(ಏಜನ್ಸೀಸ್)
Comments
Story first published: Tuesday, July 3, 2007, 5:30 [IST]