ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರಾಯಿ ಬಂದ್! ಬಡ ಕುಡುಕರಿಗಿನ್ನು ಕಷ್ಟದ ದಿನಗಳು!

By Staff
|
Google Oneindia Kannada News

ಬೆಂಗಳೂರು : ಆದಾಯಕ್ಕಿಂತಲೂ ಸಮಾಜದ ಆರೋಗ್ಯವೇ ಮುಖ್ಯ ಎನ್ನುತ್ತ ರಾಜ್ಯದ ದೋಸ್ತಿ ಸರ್ಕಾರ, ಒಂದೊಂದೇ ಕಹಿಗುಳಿಗೆಗಳನ್ನು ಜೀರ್ಣಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಪ್ರತಿರೋಧಗಳ ಮಧ್ಯೆಯೂ ಭಾನುವಾರದಿಂದ ಸಾರಾಯಿ ನಿಷೇಧ ಜಾರಿಗೆ ಬಂದಿದೆ.

ಸುಮಾರು 2000ಕೋಟಿ ರೂ.ಗಳನ್ನು ಆದಾಯ ರೂಪದಲ್ಲಿ, ರಾಜ್ಯದ ಬೊಕ್ಕಸಕ್ಕೆ ತುಂಬಿಸುತ್ತಿದ್ದ ಸಾರಾಯಿ ಉದ್ಯಮ ಇಂದಿನಿಂದ ಬಂದ್. ರಾಜ್ಯದ 15,248 ಸಾರಾಯಿ ಅಂಗಡಿಗಳಲ್ಲಿನ ಗಿಜಿಗಿಜಿ ಇಂದಿನಿಂದ ಕಣ್ಮ ರೆ. ಸಾರಾಯಿ ಮಾರಾಟ ಮಾಡಿ ಬದುಕುತ್ತಿದ್ದ ಲಕ್ಷಾಂತರ ಮಂದಿ, ಬೀದಿಪಾಲು.

ಸಾರಾಯಿ ಮಾರಾಟ ನಿಷೇಧ ಎಂಬ ಸುದ್ದಿಯನ್ನು ಟೀವಿಯಲ್ಲಿ ವೀಕ್ಷಿಸುತ್ತಿದ್ದ , ಸಾರಾಯಿ ಮಾರಾಟಗಾರನೊಬ್ಬ ಹೃದಯಾಘಾತಕ್ಕೆ ಬಲಿಯಾದ ಘಟನೆ ಗೌರಿಬಿದನೂರು ತಾಲೂಕಿನಲ್ಲಿ ವರದಿಯಾಗಿದೆ.

ಸಾರಾಯಿ ನಿಷೇಧಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಹಿಳಾ ಸಂಘಗಳು ಸರ್ಕಾರದ ಧೋರಣೆಯನ್ನು ಸ್ವಾಗತಿಸಿವೆ.

ಸಾರಾಯಿ ಕುಡಿಯುವುದು ನಮ್ಮ ಹಕ್ಕು.. ನಮ್ಮ ಹಕ್ಕನ್ನು ಸರ್ಕಾರ ಕಿತ್ತುಕೊಂಡಿದೆ ಎಂಬುದು ಕುಡುಕರ ಗೋಳು. ಕಡಿಮೆ ದುಡ್ಡಿಗೆ ಹೊಟ್ಟೆತುಂಬ ಕುಡಿದು, ಕಿಕ್ ಪಡೆಯುತ್ತಿದ್ದ ಬಡ ಕುಡುಕರು, ಮುಂದೇನು ಕುಡಿಯಬೇಕು ಎನ್ನುವ ಚಿಂತೆಯಲ್ಲಿದ್ದಾರೆ!

ಮತ್ತೊಂದು ಕಡೆ, ಸರ್ಕಾರದ ನೀತಿ ವಿರುದ್ಧ ಸಾರಾಯಿ ಮಾರಾಟಗಾರರು ಕಾನೂನು ಸಮರ ನಡೆಸಲು ಸಿದ್ಧತೆ ನಡೆಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X