ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಂಪನಾಗೆ ಭಾಷಾ ಸಮ್ಮಾನ್ ಪ್ರಶಸ್ತಿಯ ಗೌರವ
ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ ಡಾ.ಹಂ.ಪ.ನಾಗರಾಜಯ್ಯ(ಹಂಪನಾ), ಸಾಹಿತ್ಯ ಕಲಾ ಅಕಾಡೆಮಿ ನೀಡುವ ಭಾಷಾ ಸಮ್ಮಾನ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಪ್ರಾಚೀನ ಕನ್ನಡ ಸಾಹಿತ್ಯ ಹಾಗೂ ಜೈನ ಸಾಹಿತ್ಯಕ್ಕೆ ಅವರು ನೀಡಿರುವ ಮೌಲಿಕ ಕೊಡುಗೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ತೆಲುಗು ಸಾಹಿತಿ ವೆಟೂರಿ ಆನಂದಮೂರ್ತಿ ಈ ಪ್ರಶಸ್ತಿಗೆ ಆಯ್ಕೆಯಾದ ಇನ್ನೊಬ್ಬ ವ್ಯಕ್ತಿ.
ಪ್ರಶಸ್ತಿ 50ಸಾವಿರ ರುಪಾಯಿ ನಗದು, ಪ್ರಮಾಣಪತ್ರ ಹಾಗೂ ಫಲಕ ಒಳಗೊಂಡಿದ್ದು, ಆಗಸ್ಟ್ 21ರಂದು ಹೈದರಾಬಾದ್ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
(ಏಜನ್ಸೀಸ್)
Story first published: Friday, June 29, 2007, 5:30 [IST]