ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರನ ಮುಖಕ್ಕೆ ಮಸಿ ಬಳಿಯಲು ಹುನ್ನಾರ : ಬಾಲಕೃಷ್ಣ

By Staff
|
Google Oneindia Kannada News

ಬೆಂಗಳೂರು : ಆದಾಯ ತೆರಿಗೆ ದಾಳಿ ನಡೆಸುವ ಮುಖಾಂತರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ರಾಜಕೀಯ ಹುನ್ನಾರ ನಡೆಯುತ್ತಿದೆ ಎಂದು ಎಚ್.ಡಿ.ದೇವೇಗೌಡರ ಮಗ ಎಚ್.ಡಿ.ಬಾಲಕೃಷ್ಣೇಗೌಡ ಆರೋಪಿಸಿದ್ದಾರೆ.

ಇನ್ಫಾರ್ಮೇಷನ್ ಟೆಕ್ನಾಲಜಿಯ ಒಂದು ಭಾಗ ತಮ್ಮ ಹೆಂಡತಿ ಮತ್ತು ಸಂಬಂಧಿಕರ ಹೆಸರಲ್ಲಿ ಕೊಂಡಿದ್ದು ನ್ಯಾಯಸಮ್ಮತವಾಗಿಯೇ ಇದೆ ಮತ್ತು ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಅವರು ಶುಕ್ರವಾರ ಸುದ್ದಿಗಾರರೊಂದಿಗೆ ತಿಳಿಸಿದರು.

ಬಹುಕೋಟಿ ಬಾಳುವ ಕಟ್ಟಡವನ್ನು ಕಡಿಮೆ ಬೆಲೆಗೆ ಕೊಂಡದ್ದು ಮತ್ತು ಹಣ ಸಂದಾಯವಾದ ಬಗ್ಗೆ ಯಾವುದೇ ದಾಖಲಾತಿ ಇಲ್ಲದಿರುವ ಸುದ್ದಿ ಪತ್ರಿಕೆಗಳಲ್ಲಿ ಬಂದದ್ದು ಅವರಿಗೆ ಸಾಕಷ್ಟು ಇರುಸುಮುರುಸು ಮಾಡಿದ್ದು ಅವರ ಮಾತುಗಳಲ್ಲಿ ಸ್ಪಷ್ಟವಾಗಿತ್ತು.

ಮುಂಗಡವಾಗಿ ನೀಡಿದ ಹಣ 2004ರಲ್ಲಿ ಸಲ್ಲಿಸಿದ ಆದಾಯ ತೆರಿಗೆ ವಿವರಗಳಲ್ಲಿ ಉಲ್ಲೇಖಿಸಲಾಗಿದೆ. 2007ರಲ್ಲಿ ಆಸ್ತಿಯ ನೊಂದಣಿಯಾಗಿದ್ದು, ರು. 4.30 ಕೋಟಿ ಹಣವನ್ನು ಚೆಕ್ ಮುಖಾಂತರ ನೀಡಲಾಗಿದೆ ಎಂದು ಬಾಲಕೃಷ್ಣಗೌಡ ಸ್ಪಷ್ಟಪಡಿಸಿದರು.

ಈ ವ್ಯವಹಾರದಲ್ಲಿ ಕುಮಾರಸ್ವಾಮಿ ಯಾವ ರೀತಿಯಲ್ಲಿಯೂ ಭಾಗಿಯಾಗಿಲ್ಲ. ರಾಜಕೀಯ ವೈರಿಗಳು ಅವರ ಹೆಸರನ್ನು ಅನವಶ್ಯಕವಾಗಿ ಎಳೆದುತರುತ್ತಿದ್ದಾರೆ. ಅದಲ್ಲದೆ, ಯಾವುದೇ ಅಕ್ರಮ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಮಡದಿ ಕವಿತಾ ಮತ್ತು ಇತರರ ವಿರುದ್ಧ ಕ್ರಮ ಕೈಗೌಳ್ಳಬಹುದು ಎಂದು ಅವರು ಆಗ್ರಹಿಸಿದರು.

ಕವಿತಾ ನಿಯಮಿತವಾಗಿ ಆದಾಯ ತೆರಿಗೆ ಮತ್ತು ಆಸ್ತಿ ತೆರಿಗೆ ಕಟ್ಟುತ್ತಿದ್ದಾರೆ ಎಂದು ಒತ್ತಿ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X