ಜು.7:ಶಾಂತಿನಿವಾಸನೋಡಿ,ದಣಿದವರಿಗೆ ನೆರವಾಗಿ..
ಬೆಂಗಳೂರು:ಸುದೀಪ್ ಅಭಿನಯಿಸಿ ನಿರ್ದೇಶಿಸಿರುವ ಹೊಸ ಚಿತ್ರ ನಂ.73,ಶಾಂತಿನಿವಾಸವನ್ನು ನೋಡದವರಿಗೆ ವಿಶೇಷ ಪ್ರದರ್ಶನವನ್ನು ಅವಿರತ ಸಂಸ್ಥೆ ಹಾಗೂ ನೈರುತ್ಯ ವಲಯದ ರೋಟರಿ ಸಂಸ್ಥೆ Inner wheel Club and Rotaryact Club ಆಯೋಜಿಸಿದೆ.
ನಗರದ ಪಿವಿಆರ್ ಚಿತ್ರಮಂದಿರದಲ್ಲಿ ಜುಲೈ 7ರಂದು ಈ ವಿಶೇಷ ಪ್ರದರ್ಶನ ನಡೆಯಲಿದ್ದು,ಪ್ರದರ್ಶನದ ನಂತರ ಚಿತ್ರ್ರದ ನಿರ್ದೇಶಕ, ತಂತ್ರಜ್ಞ ಹಾಗೂ ಕಲಾವಿದರೊಡನೆ ಸಂವಾದ ಕಾರ್ಯಕ್ರಮವಿರುತ್ತದೆ.
ಚಿತ್ರ ಪ್ರದರ್ಶನದಿಂದ ಬರುವ ಹಣವನ್ನು ಜೆ.ಪಿ.ನಗರದಲ್ಲಿರುವ ಶ್ರೀಕೃಷ್ಣ ಸೇವಾಶ್ರಮ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರ(ಒಂದು ವರ್ಷದವರೆಗೂ ಪ್ರತಿದಿನ ಒಬ್ಬರಿಗೆ ಉಚಿತ ಡಯಾಲಿಸಿಸ್ ನೆರವು)ಹಾಗೂ ವೀರಪ್ಪನ್ ಕಾಟಕ್ಕೆ ತುತ್ತಾಗಿ ಏಳಿಗೆ ಕಾಣದ ಕೊಳ್ಳೇಗಾಲ ತಾಲೂಕು ಯಳಂದೂರಿನ ಗುಡ್ಡಗಾಡಿನ ಶಾಲೆಗಳ ನಿರ್ವಹಣೆಗೆ ವಿನಿಯೋಗಿಸಲಾಗುವುದು ನೈರುತ್ಯ ವಲಯದ ರೋಟರಿ ಸಂಸ್ಥೆ ಅಧ್ಯಕ್ಷ ಮುರಳಿಧರ ಹಾಲಪ್ಪ ಹೇಳಿದ್ದಾರೆ.
ಸ್ಥಳ:
ಪಿವಿಆರ್
ಚಿತ್ರಮಂದಿರ,
ಕೋರಮಂಗಲ
ದಿನಾಂಕ:
ಜುಲೈ
7
ಸಮಯ:ರಾತ್ರಿ
9:30
ಗಂಟೆ
ನಿಮ್ಮ ಸೀಟನ್ನು ಕಾಯ್ದಿರಿಸಲು ಇಂದೇ ಕರೆ ಮಾಡಿ
ಕೆ.ಟಿ.ಸತೀಶ್ ಗೌಡ -98800-86300
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :[email protected]
http://www.aviratha.org
(ದಟ್ಸ್ ಕನ್ನಡ ವಾರ್ತೆ)