ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆದಾಯ ತೆರಿಗೆ ಇಲಾಖೆ ದಾಳಿ: ರಿಯಲ್ ಎಸ್ಟೇಟ್ ತಲ್ಲಣ
ಬೆಂಗಳೂರು : ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಬಿಲ್ಡರ್ಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ಕಣ್ಣು ಬಿದ್ದಿದೆ. ಇವರುಗಳ ಮೇಲೆ ಐಟಿ ದಾಳಿ ನಡೆದಿರುವ ಸುದ್ದಿ ಮಂಗಳವಾರ ಖಚಿತಪಟ್ಟಿದೆ.
ಸೋಮವಾರ ಮಧ್ಯರಾತ್ರಿ ವೇಳೆ ನಗರದ ವಿವಿಧೆಡೆ ರಿಯಲ್ ಎಸ್ಟೇಟ್ ಉದ್ಯಮದವರ ಕಚೇರಿ ಮತ್ತು ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಲವೆಡೆ ಮಂಗಳವಾರ ಮಧ್ಯಾಹ್ನದವರೆಗೆ ದಾಳಿ ಮುಂದುವರೆದಿದೆ.
ದಿಢೀರ್ ದಾಳಿಯಿಂದ ರಿಯಲ್ ಎಸ್ಟೇಟ್ ಉದ್ಯಮ ತತ್ತರಿಸಿದೆ. ರಿಯಲ್ ಎಸ್ಟೇಟ್ ಉದ್ಯಮಿ ಗೊಟ್ಟಿಗೆರೆ ಮಂಜು, ಬಿಲ್ಡರ್ಗಳಾದ ಕುಪೇಂದ್ರ ರೆಡ್ಡಿ, ರೆಡ್ಡಿ ವೀರಣ್ಣ, ಉಪೇಂದ್ರ ರಡ್ಡಿ ಸೇರಿದಂತೆ ಆರು ಮಂದಿ ಪ್ರಭಾವಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆದಿದೆ.
ನಗದು, ಆಭರಣ, ಆಸ್ತಿ ದಾಖಲೆಗಳು ಸೇರಿದಂತೆ ಕೋಟ್ಯಂತರ ಮೌಲ್ಯದ ಹಣ ದಾಳಿ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
(ಏಜನ್ಸೀಸ್)
Story first published: Tuesday, June 26, 2007, 5:30 [IST]