ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೊಡಗಿನಲ್ಲಿ ಮಳೆಮಳೆಮಳೆ: ಕಾವೇರಿ ಕಣಿವೆಯಲ್ಲಿ ಹರ್ಷ
ಮೈಸೂರು : ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಆರ್ಭಟ ಬಿರುಸಾಗಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಮಳೆ ಸುರಿಯುತ್ತಿದ್ದು, ಕೆಆರ್ಎಸ್ ಮತ್ತಿತರ ಜಲಾಶಯಗಳಲ್ಲಿ ನೀರಿನ ಮಟ್ಟ ಸೋಮವಾರ ಹೆಚ್ಚಿದೆ.
ಕೆಆರ್ಎಸ್ನಲ್ಲಿ ನೀರಿನ ಪ್ರಮಾಣ 67.32 ಅಡಿಯಿಂದ 80.30ಅಡಿ ಹೆಚ್ಚಿದೆ. ಈ ಭಾಗದ ರೈತರು ಮಳೆರಾಯನ ದಯೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಕಬಿನಿ, ಹಾರಂಗಿ, ಹೇಮಾವತಿ, ಕೆಆರ್ಎಸ್ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ಒಳ ಹರಿವು ಗಮನಾರ್ಹವಾಗಿ ಅಧಿಕಗೊಂಡಿದೆ.
(ಯುಎನ್ಐ)
Comments
Story first published: Monday, June 25, 2007, 5:30 [IST]