ಎರಡನೇ ಅವಧಿಗೆ ರಾಷ್ಟ್ರಪತಿಯಾಗಲು ಕಲಾಂ ರೆಡಿ
ಪೂರಕ
ವಾತಾವರಣವಿದ್ದರೇ,
ಎರಡನೇ
ಅವಧಿಗೆ
ರಾಷ್ಟ್ರಪತಿಯಾಗಲು
ಎ.ಪಿ.ಜೆ.ಅಬ್ದುಲ್
ಕಲಾಂ
ಸಿದ್ಧರಿದ್ದಾರೆ
ಎಂದು
ಟಿಡಿಪಿ
ಮುಖಂಡ
ಚಂದ್ರಬಾಬು
ನಾಯ್ಡು
ನವದೆಹಲಿಯಲ್ಲಿ
ಹೇಳಿದ್ದಾರೆ.
ಹೊಸದಾಗಿ
ರೂಪುಗೊಂಡಿರುವ
ತೃತೀಯ
ರಂಗ(ಯುಎನ್
ಪಿಎ
)ಪಕ್ಷಗಳ
ಸಭೆಯಲ್ಲಿ
ಅವರು
ಈ
ವಿಚಾರ
ತಿಳಿಸಿದ್ದಾರೆ.
ಕಲಾಂ
ಜೊತೆ
ಮಾತುಕತೆ
ನಡೆಸಿದ್ದು,
ಕಲಾಂ
ಈ
ಬಗ್ಗೆ
ಸೂಚನೆ
ನೀಡಿದ್ದಾರೆ
ಎಂದು
ಅವರು
ಹೇಳಿದ್ದಾರೆ.
600 ಮಂದಿ ಜೈಲಿನಿಂದ ಬಯಲಿಗೆ
ದೆಹಲಿ ಮುಖ್ಯ ನ್ಯಾಯಾಲಯದ ಆದೇಶದ ಅನ್ವಯ ತಿಹಾರ್ ಜೈಲಿನಿಂದ 600 ಕ್ಕೂ ಅಧಿಕ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ.
ಸಣ್ಣ ಪುಟ್ಟ ಆರೋಪ ಹಾಗೂ ದೊಂಬಿ ಜಗಳದ ಮೇಲೆ ಬಂಧಿತರಾಗಿದ್ದ 623 ಖೈದಿಗಳನ್ನು ಬಿಡುಗಡೆ ಮಾಡಲಾಗಿದ್ದು, 2,000ರೂ ಮುಖಬೆಲೆಯ ಮುಚ್ಚಳಿಕೆಯನ್ನು ಬರೆಸಿಕೊಳ್ಳಲಾಗಿದೆ ಎಂದು ತಿಹಾರ್ ಜೈಲಿನ ವಕ್ತಾರ ಸುನೀಲ್ ಗುಪ್ತ ಹೇಳಿದ್ದಾರೆ.
6,500 ಜನರನ್ನು ಹೊಂದುವ ಸಾಮರ್ಥ್ಯವಿರುವ ತಿಹಾರ್ ಜೈಲಿನಲ್ಲಿ ಸದ್ಯ 13 ಸಾವಿರಕ್ಕೂ ಅಧಿಕ ಖೈದಿಗಳಿದ್ದಾರೆ.
***
ರೈತರಿಗೆ ಲೇವಾದೇವಿದಾರರ ಕಿರುಕುಳ ತಡೆಗೆ ಆದೇಶ
ರೈತರಿಗೆ ಲೇವಾದೇವಿದಾರರಿಂದ ಆಗುತ್ತಿರುವ ಕಿರುಕುಳವನ್ನು ತಡೆಗಟ್ಟಲು ಉಪ ವಿಭಾಗೀಯ ಸಹಾಯಕ ಕಮೀಷನರ್, ತಾಲ್ಲೂಕಿನ ತಹಶೀಲ್ದಾರ್ ಮತ್ತು ಹೋಬಳಿಯ ರೆವಿನ್ಯೂ ಇನ್ಸ್ಪೆಕ್ಟರ್ ಅವರುಗಳಿಗೆ ಅಧಿಕಾರ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಅದಕ್ಕೆ ಲೇವಾದೇವಿದಾರರ ಕಿರುಕುಳ ಪ್ರಮುಖ ಕಾರಣವಾಗಿದ್ದು, ಅನೇಕರು ಅಧಿಕೃತ ಪರವಾನಗಿ ಪಡೆಯದೇ ಲೇವಾದೇವಿ ವ್ಯವಹಾರ ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಆದ್ದರಿಂದ ಅನಧಿಕೃತ ಲೇವಾದೇವಿ ವ್ಯವಹಾರಗಳನ್ನು ತಡೆಗಟ್ಟುವುದು ಹಾಗೂ ಲೇವಾದೇವಿದಾರರು ಸಾಲಗಾರರಿಗೆ ಕಿರುಕುಳ ನೀಡದಂತೆ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳುವುದು ಅಗತ್ಯ ಎಂದು ಮುಖ್ಯಮಂತ್ರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
***
ಆಯ್ಕೆ ಸಮಿತಿಗೆ ಗಿರೀಶ್ ಕಾಸರವಳ್ಳಿ ಅಧ್ಯಕ್ಷ
2006 ಮತ್ತು 07ನೇ ಸಾಲಿನ ಕನ್ನಡ ಹಾಗೂ ಇತರ ಪ್ರಾದೇಶಿಕ ಭಾಷೆಗಳ ಗುಣಾತ್ಮಕ ಚಲನಚಿತ್ರಗಳಿಗೆ ಸಹಾಯಧನ ನೀಡುವ ಕುರಿತು ಆಯ್ಕೆ ಮಾಡಲು ಖ್ಯಾತ ಚಲನಚಿತ್ರ ನಿರ್ದೇಶಕ ಶ್ರೀ ಗಿರೀಶ್ ಕಾಸರವಳ್ಳಿ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಗಿರಡ್ಡಿ ಗೋವಿಂದರಾಜ್, ಎನ್. ಎಸ್. ಶಂಕರ್, ಬಿ. ಎನ್. ಸುಬ್ರಹ್ಮಣ್ಯ, ಪ್ರೊ ಕೆ. ಇ. ರಾಧಾಕೃಷ್ಣ, ಸಿ. ಬಸವಲಿಂಗಯ್ಯ, ಬಾನುಮುಸ್ತಾಕ್, ವಿಜಯಕುಮಾರ್ ಸಮಿತಿಯ ಸದಸ್ಯರಾಗಿದ್ದು, ವಾರ್ತಾ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ
***
ರೀಮೇಕ್ ಚಿತ್ರಕ್ಕೂ ತೆರಿಗೆ ವಿನಾಯಿತಿ :ಸಿಎಂ ಸಮರ್ಥನೆ
ಕನ್ನಡ ಚಿತ್ರೋದ್ಯಮದ ಹಿತವನ್ನು ಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರ ರೀಮೇಕ್ ಚಿತ್ರಗಳಿಗೂ ಶೇ.100ರಷ್ಟು ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಚಿತ್ರರಂಗದ ಗಣ್ಯರ ಮನವಿ ಸ್ವೀಕರಿಸಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು .
ರೀಮೇಕ್
ಮತ್ತು
ಸ್ವಮೇಕ್
ವಾದಕ್ಕಿಂತಲೂ,
ಕನ್ನಡ
ಚಿತ್ರರಂಗದ
ಹಿತವೇ
ನಮಗೆ
ಮುಖ್ಯ
.
ಮುಂದಿನ
ಸಂಪುಟ
ಸಭೆಯಲ್ಲಿ
ಈ
ಬಗ್ಗೆ
ನಿರ್ಣಯ
ಕೈಗೊಳ್ಳುವುದಾಗಿ
ಕುಮಾರಸ್ವಾಮಿ
ಹೇಳಿದರು.