For Daily Alerts
ತೆರಿಗೆ ಇಲಾಖೆ ಬಲೆಯಲ್ಲಿ ಮುಂಗಾರುಮಳೆ ಕೃಷ್ಣಪ್ಪ !
ಬೆಂಗಳೂರು : ಬಾಕ್ಸಾಫೀಸ್ನಲ್ಲಿ ದಾಖಲೆ ಮಾಡಿ ಮುನ್ನುಗ್ಗುತ್ತಿರುವ ಮುಂಗಾರುಮಳೆ ಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪ ಅವರ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೃಷ್ಣಪ್ಪ ಅವರ ಬಸವನಗುಡಿಯಲ್ಲಿರುವ ಮನೆ, ನೆಲಮಂಗಲ ಸಮೀಪದ ಅಡಕೆ ಮಾರನಹಳ್ಳಿಯಲ್ಲಿರುವ ಮನೆ ಮತ್ತು ಗಾಂಧೀನಗರದಲ್ಲಿರುವ ಎರಡು ಕಚೇರಿಗಳ ಮೇಲೆ, ಆದಾಯ ತೆರಿಗೆ ಅಧಿಕಾರಿಗಳ ಎರಡು ತಂಡ ದಾಳಿ ನಡೆಸಿ, ಸಾಕಷ್ಟು ವಿಚಾರಣೆ ನಡೆಸಿದೆ.
ದಾಳಿ ಸಂದರ್ಭದಲ್ಲಿ ಹಣ ಹಾಗೂ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.ಮುಂಗಾರು ಮಳೆ ಚಿತ್ರ 40ರಿಂದ50ಕೋಟಿ ರೂಪಾಯಿ ಲಾಭ ಗಳಿಸಿದ ಚಿತ್ರ.
(ದಟ್ಸ್ ಕನ್ನಡ ವಾರ್ತೆ)
Story first published: Tuesday, June 19, 2007, 5:30 [IST]