ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆರ್.ಎಲ್.ಜಾಲಪ್ಪ ವಿರುದ್ಧ ಕೇಸ್ ಹಾಕಲು ಗ್ರೀನ್ ಸಿಗ್ನಲ್
ಬೆಂಗಳೂರು : ಟೀಕೆಯೊಂದಕ್ಕೆ ಸಂಬಂಧಿಸಿದಂತೆ ಸಂಸದ ಆರ್. ಎಲ್ .ಜಾಲಪ್ಪ ವಿರುದ್ಧ ವ್ಯಾಜ್ಯ ಹೂಡಲು ರಾಜ್ಯ ಅಡ್ವೋಕೇಟ್ ಜನರಲ್ ಸಮ್ಮತಿ ನೀಡಿದ್ದಾರೆ.
ಬೆಂಗಳೂರು ದೂರದರ್ಶನದ ಹಿರಿಯ ನಿರ್ದೇಶಕ ಡಾ.ಮಹೇಶ್ ಜೋಷಿ ವ್ಯಾಜ್ಯ ಹೂಡಲು ಅನುಮತಿ ಕೋರಿದ್ದರು.
ಲಘು ಟೀಕೆ ವಿರುದ್ಧ ಮೊಕದ್ದಮೆ ಹೂಡಬಯಸುವ ವ್ಯಕ್ತಿ, ಮೊದಲಿಗೆಅಡ್ವೋಕೇಟ್ ಜನರಲ್ರ ಒಪ್ಪಿಗೆ ಪಡೆಯಬೇಕಾಗುತ್ತದೆ. 1971ನೇ ಕಾಯ್ದೆ(ನ್ಯಾಯಾಲಯಗಳ ನಿಂದನೆ)ಯ, 15(1) (ಬಿ) ಪರಿಚ್ಛೇದದ ಅನ್ವಯ ಡಾ.ಜೋಷಿ ಅರ್ಜಿ ಸಲ್ಲಿಸಿದ್ದರು.
ಹಿನ್ನೆಲೆ : ದೂರದರ್ಶನಕ್ಕೆ ಸಂಬಂಧಿಸಿದಂತೆ ಸಂಸದ ಜಾಲಪ್ಪ , ಡಾ.ಜೋಷಿ ವಿರುದ್ಧ ಮಾತ್ರವಲ್ಲದೆ ರಾಜ್ಯ ಹೈಕೋರ್ಟ್ ವಿರುದ್ಧವೂ ಹಲವು ಆರೋಪಗಳನ್ನು ಮಾಡಿ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, June 19, 2007, 5:30 [IST]