ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತೃತೀಯ ರಂಗದ ಆಯ್ಕೆ ಅಬ್ದುಲ್ ಕಲಾಂ : ನಿಮ್ಮ ಆಯ್ಕೆ?
ಚೆನ್ನೈ : ರಾಷ್ಟ್ರಪತಿ ಸ್ಥಾನಕ್ಕೆ ಪೈಪೋಟಿ ಮುಂದುವರೆದಿದೆ. ಎಂಟು ಪ್ರಾದೇಶಿಕ ಪಕ್ಷಗಳ ತೃತೀಯ ರಂಗವು, ಅಬ್ದುಲ್ ಕಲಾಂ ಎರಡನೇ ಅವಧಿಗೆ ರಾಷ್ಟ್ರಪತಿಯಾಗಿ ಮುಂದುವರೆಯಬೇಕೆಂದು ಸೋಮವಾರ ಬಯಸಿದೆ.
ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ, ಯುಪಿಎ ಮತ್ತು ಎಡಪಕ್ಷಗಳ ಅಭ್ಯರ್ಥಿ ಪ್ರತಿಭಾ ಪಾಟೀಲ್ರನ್ನು ಬೆಂಬಲಿಸದಿರಲು ತೀರ್ಮಾನ ಕೈಗೊಳ್ಳಲಾಗಿದೆ.
ಪ್ರತಿಭಾ ಅವರ ಹೆಸರನ್ನು ಸೂಚಿಸಿ, ಸೋನಿಯಾ ಗಾಂಧಿ ಜೋಕ್ ಮಾಡಿದ್ದಾರೆ. ರಾಷ್ಟ್ರಪತಿ ಸ್ಥಾನಕ್ಕೆ ಅಬ್ದುಲ್ ಕಲಾಂ ಸೂಕ್ತ ಆಯ್ಕೆ. ಅವರ ಮನವೊಲಿಸಿ, ಎರಡನೇ ಅವಧಿಗೆ ಆಯ್ಕೆ ಮಾಡುವುದು ಎಲ್ಲಾ ಪಕ್ಷಗಳ ಕರ್ತವ್ಯ ಎಂದು ಎಐಎಡಿಎಂಕೆ ನಾಯಕಿ ಜಯಲಲಿತಾ ಹೇಳಿದ್ದಾರೆ. ಈ ಸಂದರ್ಭದಲ್ಲಿ ಚಂದ್ರಬಾಬು ನಾಯ್ಡು, ಮುಲಾಯಂ ಸಿಂಗ್ ಯಾದವ್ ಹಾಜರಿದ್ದರು.
ಈ ಬೆಳವಣಿಗೆಯಿಂದ ರಾಷ್ಟ್ರಪತಿ ಸ್ಥಾನಕ್ಕೆ ಪ್ರತಿಭಾ, ಶೇಖಾವತ್ ಜೊತೆಗೆ ಕಲಾಂ ಹೆಸರು ಕೇಳಿಬಂದಿದೆ. ಈ ಮೂವರಲ್ಲಿ ಯಾರು ಸೂಕ್ತರು ಎಂಬುದು ಎಲ್ಲೆಡೆ ಚರ್ಚಿತ.ಓದುಗರು ತಮ್ಮ ಆಯ್ಕೆ ತಿಳಿಸಬಹುದು.
(ಏಜನ್ಸೀಸ್)
Comments
Story first published: Monday, June 18, 2007, 5:30 [IST]