ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಗೇರಿ ಹಾಗೂ ಸವದಿ ಸಂಸದೀಯ ಕಾರ್ಯದರ್ಶಿಗಳಾಗಿ ಆಯ್ಕೆ
ಬೆಂಗಳೂರು : ಭಾರತೀಯ ಜನತಾ ಪಕ್ಷದ ಶಾಸಕರುಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಲಕ್ಷ್ಮಣ ಸವದಿ ರಾಜ್ಯ ಸರ್ಕಾರದ ಸಂಸದೀಯ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ.
ಭಾರತೀಯ
ಜನತಾಪಕ್ಷ
ಒಂದೆರಡು
ದಿನಗಳ
ಹಿಂದಷ್ಟೇ
,
ಈ
ಕುರಿತು
ಮುಖ್ಯಮಂತ್ರಿ
ಎಚ್.ಡಿ.ಕುಮಾರಸ್ವಾಮಿ
ಅವರಿಗೆ
ಶಿಫಾರಸು
ಮಾಡಿತ್ತು
ಎಂದು
ಮೂಲಗಳು
ಹೇಳಿವೆ.
ಸಂಸದೀಯ
ಕಾರ್ಯದರ್ಶಿ
ಹುದ್ದೆ
ರಾಜ್ಯ
ಸಚಿವ
ಸ್ಥಾನಮಾನ
ಹೊಂದಿದೆ.
ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿದ್ದ ಕಾಗೇರಿ ಅವರನ್ನು ತೃಪ್ಪಿಪಡಿಸಲು ಹಾಗೂ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಲಕ್ಷ್ಮಣ ಸವದಿ ಅವರಿಗೆ ಈ ಹುದ್ದೆ ನೀಡಲಾಗಿದೆ ಎಂಬ ಮಾತುಗಳು ರಾಜಕೀಯ ಅಂಗಣದಿಂದ ಕೇಳಿಬಂದಿವೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Sunday, June 17, 2007, 5:30 [IST]