ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವ ಅವಹೇಳನ ... ರಾಜ್ಯದಲ್ಲಿ 17ರಂದು ಪ್ರತಿಭಟನೆ

By Staff
|
Google Oneindia Kannada News

ಹುಬ್ಬಳ್ಳಿ : ಡಾ.ಬಂಜಗೆರೆ ಜಯಪ್ರಕಾಶ್ ಅವರ ಅನುದೇವಾ ಹೊರಗಣವನು ಪುಸ್ತಕದ ವಿವಾದ, ಕಾವೇರುತ್ತಿದೆ.

ಈ ಪುಸ್ತಕದ ಮುಟ್ಟುಗೋಲಿಗೆ ಆಗ್ರಹಿಸಿ, ಜೂ.17ರಂದು ರಾಜ್ಯ ವ್ಯಾಪಿ ಮುಷ್ಕರಕ್ಕೆ ಸಂಘಟನೆಗಳು ಕರೆ ನೀಡಿವೆ.

ಈ ಪುಸ್ತಕದಿಂದ ಬಸವಣ್ಣ ಅವರಿಗೆ ಅಪಚಾರ ಮಾಡಲಾಗಿದೆ. ಬಸವ ಅನುಯಾಯಿಗಳಿಗೆ ನೋವಾಗಿದೆ. ಅಲ್ಲದೇ ಕುವೆಂಪು ಮತ್ತು ಅಂಬೇಡ್ಕರ್ ಅವರಿಗೂ ಜಯಪ್ರಕಾಶ್ ಅವಹೇಳನ ಮಾಡಿದ್ದಾರೆ ಎಂದು ಡಾ.ಪಾಟೀಲ ಪುಟ್ಟಪ್ಪ ಟೀಕಿಸಿದ್ದಾರೆ.

ಅಕ್ಕನ ಬಳಗ ಸೇರಿದಂತೆ ವೀರಶೈವ, ಲಿಂಗಾಯಿತ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ. ಪುಸ್ತಕವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳದಿದ್ದರೇ, ಉಗ್ರ ಹೋರಾಟ ನಡೆಸುವುದಾಗಿ ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X