ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜೈಲಿನಲ್ಲಿ ಮಾರಾಮಾರಿ :ಓರ್ವ ವಿಚಾರಣಾಧೀನ ಖೈದಿ ಸಾವು
ಬೆಂಗಳೂರು :ಇಬ್ಬರು ವಿಚಾರಣಾಧೀನ ಖೈದಿಗಳ ನಡುವೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಗರದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಬೆಳಗ್ಗೆ ಉಪಾಹಾರಕ್ಕೆ ಬಿಟ್ಟಾಗ, ಅಬ್ದುಲ್ ಸಾದಿಕ್ ಹಾಗೂ ಹಾಗೂ ಗೋಪಾಲ್ ಎಂಬ ವಿಚಾರಣಾಧೀನ ಖೈದಿಗಳು ಪರಸ್ಪರ ಜಗಳಕ್ಕಿಳಿದಿದ್ದಾರೆ. ಈ ಸಂದರ್ಭದಲ್ಲಿ ಗೋಪಾಲ౬ ಅಬ್ದುಲ್ ಸಾದಿಕ್ ಗೆ ಬಂಡೆಗಲ್ಲಿನಿಂದ ಹೊಡೆದು ಕೊಲೆಗೈದಿದ್ದಾನೆ ಎಂದು ಕಾರಾಗೃಹದ ಮೂಲಗಳು ಹೇಳಿವೆ.
ಗೋಪಾಲ್ ಕೊಲೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿ.ಈ ಜಗಳಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, June 13, 2007, 5:30 [IST]