ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಲಾರಪ್ಪ ಪ್ರವಾಸ :ಬೆಂಗಳೂರು ವಿವಿ ಹೊಸ ವಿವಾದ!
ಬೆಂಗಳೂರು :ಬೆಂಗಳೂರು ವಿಶ್ವವಿದ್ಯಾಲಯದ ದೂರಶಿಕ್ಷಣ ಇಲಾಖೆ ನಿರ್ದೇಶಕ ಬಿ.ಸಿ.ಮೈಲಾರಪ್ಪ ಅವರ ಇತ್ತೀಚಿನ ಶ್ರೀಲಂಕಾ ಪ್ರವಾಸ ವಿವಾದಕ್ಕೀಡಾಗಿದೆ.
ಡಾ.ಮೈಲಾರಪ್ಪ ವಿಶ್ವವಿದ್ಯಾಲಯಕ್ಕೆ ತಿಳಿಸದೆ ಈ ಪ್ರವಾಸ ಕೈಗೊಂಡಿದ್ದರು ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬಂದಿದ್ದವು.ಅಲ್ಲದೆ ರಾಜ್ಯಪಾಲರನ್ನು ನಿಂದಿಸಿ ಟೀಕೆ ಮಾಡಿದ ಆರೋಪದ ಮೇಲೆ, ಅವರು ಈಗಾಗಲೇ ವಿವಿಯ ಆಯೋಗ ಒಂದರಿಂದ ತನಿಖೆ ಎದುರಿಸುತ್ತಿದ್ದಾರೆ.
ಈ ಬಗ್ಗೆ ವಿವರ ನೀಡಿರುವ ವಿವಿ ಉಪಕುಲಪತಿ ಎಚ್.ಎ.ರಂಗನಾಥ್ ಸುದ್ದಿಗಾರರ ಜೊತೆ ಮಾತನಾಡುತ್ತ, ಅಧ್ಯಯನ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಮೈಲಾರಪ್ಪ ಕೊಲಂಬೋಗೆ ಭೇಟಿ ನೀಡಿದ್ದರು ಎಂಬ ಮಾತುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಸಿಂಡಿಕೇಟ್ ಈ ಕುರಿತು ಹೆಚ್ಚಿನ ವಿವರಣೆ ಕೇಳಲು ನಿರ್ಧರಿಸಿದೆ ಎಂದು ತಿಳಿಸಿದರು.
ಮೈಲಾರಪ್ಪ ವಿರುದ್ಧ ಆರೋಪದ ಮೇಲೆ ಆರೋಪ ಬರುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಮೇಲೆ ಕಪ್ಪು ಛಾಯೆ ಕವಿದಂತಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, June 13, 2007, 5:30 [IST]