ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಲಾರಪ್ಪ ಪ್ರವಾಸ :ಬೆಂಗಳೂರು ವಿವಿ ಹೊಸ ವಿವಾದ!

By Staff
|
Google Oneindia Kannada News

ಬೆಂಗಳೂರು :ಬೆಂಗಳೂರು ವಿಶ್ವವಿದ್ಯಾಲಯದ ದೂರಶಿಕ್ಷಣ ಇಲಾಖೆ ನಿರ್ದೇಶಕ ಬಿ.ಸಿ.ಮೈಲಾರಪ್ಪ ಅವರ ಇತ್ತೀಚಿನ ಶ್ರೀಲಂಕಾ ಪ್ರವಾಸ ವಿವಾದಕ್ಕೀಡಾಗಿದೆ.

ಡಾ.ಮೈಲಾರಪ್ಪ ವಿಶ್ವವಿದ್ಯಾಲಯಕ್ಕೆ ತಿಳಿಸದೆ ಈ ಪ್ರವಾಸ ಕೈಗೊಂಡಿದ್ದರು ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬಂದಿದ್ದವು.ಅಲ್ಲದೆ ರಾಜ್ಯಪಾಲರನ್ನು ನಿಂದಿಸಿ ಟೀಕೆ ಮಾಡಿದ ಆರೋಪದ ಮೇಲೆ, ಅವರು ಈಗಾಗಲೇ ವಿವಿಯ ಆಯೋಗ ಒಂದರಿಂದ ತನಿಖೆ ಎದುರಿಸುತ್ತಿದ್ದಾರೆ.

ಈ ಬಗ್ಗೆ ವಿವರ ನೀಡಿರುವ ವಿವಿ ಉಪಕುಲಪತಿ ಎಚ್.ಎ.ರಂಗನಾಥ್ ಸುದ್ದಿಗಾರರ ಜೊತೆ ಮಾತನಾಡುತ್ತ, ಅಧ್ಯಯನ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಮೈಲಾರಪ್ಪ ಕೊಲಂಬೋಗೆ ಭೇಟಿ ನೀಡಿದ್ದರು ಎಂಬ ಮಾತುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಸಿಂಡಿಕೇಟ್ ಈ ಕುರಿತು ಹೆಚ್ಚಿನ ವಿವರಣೆ ಕೇಳಲು ನಿರ್ಧರಿಸಿದೆ ಎಂದು ತಿಳಿಸಿದರು.

ಮೈಲಾರಪ್ಪ ವಿರುದ್ಧ ಆರೋಪದ ಮೇಲೆ ಆರೋಪ ಬರುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಮೇಲೆ ಕಪ್ಪು ಛಾಯೆ ಕವಿದಂತಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X