ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಗಿ ಫಿಲಂಗೆ ನೋಟಿಸ್!

By Staff
|
Google Oneindia Kannada News

ತಮ್ಮ ಜೀವನ ಕತೆಯನ್ನೇ ಆಧಾರವಾಗಿಟ್ಟುಕೊಂಡು ಚಿತ್ರ ನಿರ್ಮಿಸಲು ಹೊರಟಿರುವ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ನೋಟೆಸ್ ನೀಡಲು ತೆಲಗಿ ನಿರ್ಧರಿಸಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆ ಇನ್ನೂ ಬಾಕಿ ಇರುವಂತೆ ಚಿತ್ರ ತಯಾರಿಗೆ ಮುಂದಾಗಿರುವುದು ಖಂಡಿಸಿ ಈ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ತೆಲಗಿ ಪರ ವಕೀಲ ಎಂ.ಟಿ. ನಾಣಯ್ಯ ಹೇಳಿದರು.

ಛಾಪಾ ಕಾಗದ ಹಗರಣದ ಪ್ರಮುಖ ರೂವಾರಿ ಅಬ್ದುಲ್ ಕರೀಂ ತೆಲಗಿ ಕುರಿತ ಸಿನಿಮಾ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ. ಮುದ್ರಾಂಕ್ , ದಿಸ್ಟಾಂಪ್ ಎಂಬ ಹೆಸರಿನ ಚಿತ್ರದಲ್ಲಿ ತೆಲಗಿಯನ್ನೇ ಹೋಲುವಂತಿರುವ ರಂಗ ಭೂಮಿ ಕಲಾವಿದ ಕೈಲಾಶ್ ಮಾನವ್ ಹೀರೋ ಆದರೆ, ಆ ಚಿತ್ರದಲ್ಲಿ ತೆಲಗಿ ಹೆಸರನ್ನುಅಬ್ದುಲ್ ರಹೀಮ್ ವೆಲಗಿ ಎಂದು ಬದಲಿಸಲಾಗಿದೆ ಎಂದು ನಿರ್ಮಾಪಕ ನೌಷದ್ ಅಲಿ ಪ್ರಕಟಿಸಿದ್ದರು.

***

ಹೇಮಾ ಸರ್ದೇಸಾಯಿಗೆ ಪ್ರಶಸ್ತಿ

ಬೆಂಗಳೂರು :ಹಿಂದಿ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಹೇಮಾ ಸರ್ದೇಸಾಯಿ ಅವರಿಗೆ ಅಂತಾರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿ ನೀಡಿ, ಆಧ್ಯಾತ್ಮ ಗುರು ರವಿಶಂಕರ್ ಗುರೂಜಿ ಗೌರವಿಸಿದರು.

ನಗರದ ಕನಕಪುರ ರಸ್ತೆಯಲ್ಲಿನ ಆರ್ಟ್ ಆಫ್ ಲೀವಿಂಗ್ ಆಶ್ರಮದಲ್ಲಿ ನಡೆದ ಸಮಾರಂಭದಲ್ಲಿ ಗೋವಾದ ಗಾಯಕಿ ಹೇಮಾರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ಸಮಾರಂಭದಲ್ಲಿ ರವಿಶಂಕರ್ ಗುರೂಜಿಯವರ ಸೋದರಿ ಭಾನು ದೀದಿ ಸೇರಿದಂತೆ ವಿಶ್ವದೆಲ್ಲೆಡೆಯಿಂದ ಬಂದಿದ್ದ ಸಾವಿರಕ್ಕೂ ಅಧಿಕ ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಹೇಮಾರವರು ತಮ್ಮ ಮುಂದಿನ ಹಿಂದಿ ಅಲ್ಬಂ ಜೂಮ್ ಅನ್ನು ತಿಂಗಳ ಕೊನೆಯಲ್ಲಿ ಹೊರತರಲಾಗುವುದು. ಪ್ರಶಸ್ತಿಯನ್ನು ಗುರೂಜಿಯಿಂದ ಸ್ವೀಕರಿಸಿದ್ದು ನನ್ನ ಪುಣ್ಯ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X