ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಮಾರ,ಸಿಂಹದಂತೆ ಮುಂದೆ ನುಗ್ಗು :ದೇವೇಗೌಡ
ಬೆಂಗಳೂರು : ಸಿಂಹದಂತೆ ಸಮಸ್ಯೆಯನ್ನು ಮುಖಾಮುಖಿ ಎದುರಿಸಬೇಕು. ಪ್ರಧಾನಿಯಾಗಿದ್ದವರ ಮಗನಾಗಿ ಸಮಸ್ಯೆಯಿಂದ ಪಲಾಯನ ಮಾಡುವುದು ತಪ್ಪು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ,ತಮ್ಮ ಪುತ್ರ ಕುಮಾರಸ್ವಾಮಿಗೆ ಬುದ್ಧಿ ಹೇಳಿದ್ದಾರೆ.
ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಿಲ್ಲದಿದ್ದರೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕುಮಾರಸ್ವಾಮಿ ಘೋಷಿಸಿದ್ದರು.ಈ ಬಗ್ಗೆ ಪ್ರತಿಕ್ರಿಯಿಸಿರುವ ದೇವೇಗೌಡರು ಸುದ್ದಿಗಾರರ ಜೊತೆ ಮಾತನಾಡುತ್ತ, ರೈತರ ಆತ್ಮಹತ್ಯೆಯನ್ನು ಕೇಂದ್ರ ಸರ್ಕಾರವೇ ತಡೆಯಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ಏನು ಮಾಡಲು ಸಾಧ್ಯ ಎಂದು ಹೇಳಿದರು.
ನಾನು ಎಂದೂ ಸೋಲನ್ನು ಒಪ್ಪಿಲ್ಲ.ಸೋಲುವ ಜಾಯಮಾನ ನಮ್ಮದಲ್ಲ ನನ್ನ ಮಗನಾಗಿ, ಕುಮಾರಸ್ವಾಮಿ ಹೆದುರಬಾರದು ಎಂದು ಹೇಳಿದರು.
ನನ್ನ ರಕ್ತ ಹರಿಸಿಯಾದರೂ, ಜೆಡಿಎಸ್ ಪಕ್ಷವನ್ನು ಉಳಿಸಿ, ಬೆಳೆಸುತ್ತೇನೆ ಎಂದು ದೇವೇಗೌಡರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, June 11, 2007, 5:30 [IST]