ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಸೂರು: ಸರಗೂರು ಸುತ್ತಮುತ್ತ ಹುಲಿಗಳಿವೆ ಹುಷಾರು!
ಮೈಸೂರು : ಹುಲಿಯಾಂದು ದಾಳಿ ನಡೆಸಿದ ಪರಿಣಾಮ ಕೃಷಿ ಕಾರ್ಮಿಕನೋರ್ವ ತೀವ್ರವಾಗಿ ಗಾಯಗೊಂಡ ಘಟನೆ, ಸರಗೂರು ಸಮೀಪದ ದೊಡ್ಡಹಳ್ಳಿ ಜೇನುಕುರುಬರಹಟ್ಟಿಯಲ್ಲಿ ನಡೆದಿದೆ.
ಚಿಕ್ಕದಾಸಿ ಗಾಯಗೊಂಡ ವ್ಯಕ್ತಿ. ಆತ ಹೊಲದಲ್ಲಿನ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಹುಲಿ ಆಕ್ರಮಣ ನಡೆಸಿದೆ. ಗ್ರಾಮಸ್ಥರು ಹುಲಿಯನ್ನು ಅರಣ್ಯಕ್ಕೆ ಅಟ್ಟಿ, ಆತನನ್ನು ರಕ್ಷಿಸಿದ್ದಾರೆ.
ಗಾಯಾಳು ಚಿಕ್ಕದಾಸಿ ಸರಗೂರಿನ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸರಗೂರು ಸುತ್ತಮುತ್ತ ಹುಲಿ ಕಂಡೆವೆಂದು ಜನ ಆಗಾಗ ಮಾತನಾಡುತ್ತಿರುತ್ತಾರೆ. ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಬೇಕು.
(ದಟ್ಸ್ ಕನ್ನಡ ವಾರ್ತೆ)
Story first published: Thursday, June 7, 2007, 5:30 [IST]