ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್‌’ ಕುರ್ಚಿ ಖಾಲಿ?

By Super
|
Google Oneindia Kannada News

ಸಾಹಿತಿ ಯು.ಆರ್‌.ಅನಂತಮೂರ್ತಿ ಅವರಿಂದ ‘ಎಂಜಲು ಪತ್ರಿಕೆ’ ಎಂದು ಕರೆಸಿಕೊಂಡ ಕನ್ನಡದ ‘ದಿ ಟೈಮ್ಸ್‌ ಆಫ್‌ ಇಂಡಿಯ’ದಲ್ಲಿ ಏನೇನೋ ಆಗುತ್ತಿದೆ. ಇದೀಗ ಬಂದ ತಾಜಾ ಸುದ್ದಿ ಏನೆಂದರೆ, ಸಂಪಾದಕ ಸ್ಥಾನಕ್ಕೆ ವೆಂಕಟನಾರಾಯಣರ ರಾಜೀನಾಮೆ!

ಗುರುವಾರ ಸಂಜೆ ಪತ್ರಕರ್ತರ ವಲಯದಲ್ಲಿ ಇದೇ ಸುದ್ದಿ. ಸಂಪಾದಕ ಸ್ಥಾನಕ್ಕೆ ವೆಂಕಟನಾರಾಯಣ ರಾಜೀನಾಮೆ ಸಲ್ಲಿಸಿದ್ದಾರೆ. ಶನಿವಾರ ಅವರು ‘ಟೈಮ್ಸ್‌ ಆಫ್‌ ಇಂಡಿಯ’ ಅಂಗಳದಿಂದ ಹೊರಬರಲಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

‘ಸಂಯುಕ್ತ ಕರ್ನಾಟಕ’, ‘ಕನ್ನಡ ಪ್ರಭ’ ಮತ್ತಿತರ ಪತ್ರಿಕೆಗಳಲ್ಲಿ ದಶಕಗಳ ಕಾಲ ಕಾರ್ಯನಿರ್ವಹಿಸಿದ್ದ ವೆಂಕಟನಾರಾಯಣ, ‘ಉಷಾ ಕಿರಣ’ ಸಂಪಾದಕರಾಗಿ ವಿಪಿಎಲ್‌ ಗ್ರೂಪ್‌ ಪ್ರವೇಶಿಸಿದ್ದರು. ನಂತರ ‘ಉಷಾ ಕಿರಣ’ಕ್ಕೆ ಬೀಗ ಬಿದ್ದಾಗ, ಕನ್ನಡ ‘ದಿ ಟೈಮ್ಸ್‌ ಆಫ್‌ ಇಂಡಿಯ’ದ ಸಂಪಾದಕ ಕುರ್ಚಿಯಲ್ಲಿ ಕುಳಿತಿದ್ದರು.

ಈ ಮಧ್ಯೆ ‘ವಿಜಯ್‌ ಟೈಮ್ಸ್‌’ಗೆ ಬೀಗ ಬಿದ್ದಿದೆ.

ಸ್ಮಶಾನಕ್ಕಾಗಿ ಹೋರಾಟ

ತುಮಕೂರಿನ ಜಯಪುರ, ಹಗಡೆನಗರ ಬಡಾವಣೆಯಲ್ಲಿ ಮೃತ ದಲಿತ ವ್ಯಕ್ತಿಯನ್ನು ಹೂಳಲು, ಬಿಡದೆ ಇನ್ನೊಂದು ಕೋಮಿನವರು ಗಲಾಟೆ ಮಾಡಿದ ಘಟನೆ ಬುಧವಾರ ಜರುಗಿದ್ದು, ಈಗ ಪರಿಸ್ಥಿತಿ ಹತೋಟಿಯಲ್ಲಿದೆ

ನಿನ್ನೆ ನಡೆದ ಘಟನೆಯಿಂದ 7 ಮನೆಗಳಿಗೆ ಹಾನಿಯಾಗಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪೊಲೀಸರು 4 ಸುತ್ತು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿ, ಪರಿಸ್ಥಿತಿಯನ್ನು ನಿಭಾಯಿಸಿಸರು ಎನ್ನಲಾಗಿದೆ.

ತುಮಕೂರಿನ ಸುತ್ತ ಮುತ್ತ 5 ಕಿ. ಮೀ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಎರಡು ಕೋಮಿನ ವೈಷಮ್ಯಕ್ಕಿಂತ ಈ ಘಟನೆಯಿಂದ ಭೂ ಮಾಫಿಯಾದ ಕೈವಾಡ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಸ್ಮಶಾನಕ್ಕಾಗಿ ಹೋರಾಟ
ತುಮಕೂರಿನ ಜಯಪುರ, ಹಗಡೆನಗರ ಬಡಾವಣೆಯಲ್ಲಿ ಮೃತ ದಲಿತ ವ್ಯಕ್ತಿಯನ್ನು ಹೂಳಲು, ಬಿಡದೆ ಇನ್ನೊಂದು ಕೋಮಿನವರು ಗಲಾಟೆ ಮಾಡಿದ ಘಟನೆ ಬುಧವಾರ ಜರುಗಿದ್ದು, ಈಗ ಪರಿಸ್ಥಿತಿ ಹತೋಟಿಯಲ್ಲಿದೆ

ನಿನ್ನೆ ನಡೆದ ಘಟನೆಯಿಂದ 7 ಮನೆಗಳಿಗೆ ಹಾನಿಯಾಗಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪೊಲೀಸರು 4 ಸುತ್ತು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿ, ಪರಿಸ್ಥಿತಿಯನ್ನು ನಿಭಾಯಿಸಿಸರು ಎನ್ನಲಾಗಿದೆ.

ತುಮಕೂರಿನ ಸುತ್ತ ಮುತ್ತ 5 ಕಿ. ಮೀ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಎರಡು ಕೋಮಿನ ವೈಷಮ್ಯಕ್ಕಿಂತ ಈ ಘಟನೆಯಿಂದ ಭೂ ಮಾಫಿಯಾದ ಕೈವಾಡ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ದಾಮಿನಿ ದೌಲತ್ತು!
ಚಿತ್ರೀಕರಣಕ್ಕೆ ಬಾರದೇ ನಟಿ ದಾಮಿನಿ ಸತಾಯಿಸುತ್ತಿದ್ದಾರೆ. ದಾಮಿನಿ ವರ್ತನೆಯಿಂದ ನಮಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ‘ಸ್ವತಂತ್ರಪಾಳ್ಯ’ ನಿರ್ಮಾಪಕರು ದೂರಿದ್ದಾರೆ.

ಒಂದು ಹಾಡು ಸೇರಿದಂತೆ ಚಿತ್ರದ ಕ್ಲೈಮ್ಯಾಕ್ಸ್‌ ಬಾಕಿ ಉಳಿದಿದೆ. ದಾಮಿನಿ ಚಿತ್ರೀಕರಣಕ್ಕೆ ಸಹಕಾರ ನೀಡುತ್ತಿಲ್ಲ. ಕನ್ನಡದ ಹುಡುಗಿಯರಿಗೆ ಅವಕಾಶ ಕೊಡೋದಿಲ್ಲ ಎಂದು ಎಲ್ಲರೂ ದೂರುತ್ತಾರೆ. ಆದರೆ ಅವಕಾಶ ಕೊಟ್ಟರೇ, ಅವರು ನಕರಾ ಮಾಡುತ್ತಾರೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ. ಅವರು ದಾಮಿನಿ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ಸಹಾ ನೀಡಿದ್ದಾರೆ.

ಮೈಸೂರು ಲ್ಯಾಂಪ್ಸ್‌ಗೆ ಬೀಗ

ಮೈಸೂರು ಲ್ಯಾಂಪ್ಸ್‌ ಪುನಶ್ಚೇತನ ಅಸಾಧ್ಯ ಎಂದು ಕೈಗಾರಿಕಾ ಸಚಿವ ಕಟ್ಟಾ ಸುಬ್ರಹ್ಮಣ್ಯ ಬುಧವಾರ ಸ್ಪಷ್ಪಪಡಿಸಿದ್ದಾರೆ.

ಸಂಸ್ಥೆ ನಷ್ಟಕ್ಕೆ ಗುರಿಯಾಗಿದ್ದು, 185ಕೋಟಿ ರೂ.ಗಳ ಸಾಲದ ಹೊರೆ ಇದೆ. ಬಹುತೇಕ ಕಾರ್ಮಿಕರು ರಾಜೀನಾಮೆ ನೀಡಿದ್ದಾರೆ ಎಂದಿರುವ ಸಚಿವರ ಹೇಳಿಕೆಯಿಂದ, ಮೈಸೂರು ಲ್ಯಾಂಪ್ಸ್‌ಗೆ ಬೀಗ ಬೀಳುವುದು ನಿಶ್ಚಿತವಾಗಿದೆ.

ದೇವರಾಜ ಅರಸ್‌ ಸ್ಮರಣೆ
ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್‌ ಅರಸ್‌ ಅವರ 25ನೇ ಪುಣ್ಯತಿಥಿಯನ್ನು ಬುಧವಾರ ರಾಜ್ಯದೆಲ್ಲೆಡೆ ಆಚರಿಸಲಾಯಿತು.

English summary
News Bytes, news alerts, news digest, brief announcements, Karnataka engagements.: Bangalore-Karnataka-India-World news pipeline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X