ಬಿಟಿ ಮೇಳಕ್ಕೆ ಹಣಕಾಸು ಸಚಿವ ಚಿದಂಬರಂ ಚಾಲನೆ...
ಬೆಂಗಳೂರು : ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಉದ್ಘಾಟಿಸುವುದರೊಂದಿಗೆ, ಮೂರು ದಿನಗಳ ‘ಬೆಂಗಳೂರು ಬಯೋ-2007’ ಮೇಳ ಗುರುವಾರ ವಿಧ್ಯುಕ್ತವಾಗಿ ಆರಂಭಗೊಂಡಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಮೇಳ ಆರಂಭಗೊಂಡಿತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಭಾರತದಲ್ಲಿ ಬ್ರಿಟನ್ ರಾಯಭಾರಿ ಸರ್ ಮೈಖೇಲ್ ಆರ್ಥರ್, ಆಸ್ಟ್ರೇಲಿಯದ ವಿಕ್ಟೋರಿಯಾ ಸ್ಟೇಟ್ನ ರಾಜ್ಯಪಾಲ ಪ್ರೊ.ಡೇವಿಡ್ ಡೇ ಕ್ರೆಸ್ಟರ್, ಸಿಂಗಾಪುರದ ಮಾಲಿಕ್ಯುಲರ್ ಆ್ಯಂಡ್ ಸೆಲ್ ಬಯಾೆಜಿ ಇನ್ಸ್ಟಿಟ್ಯೂಟ್ನ ಕಾರ್ಯಕಾರಿ ನಿರ್ದೇಶಕ ಸರ್ ಡೇವಿಡ್ ಲೇನ್ ಮೊದಲಾದ ಗಣ್ಯರು ಭಾಗವಹಿಸಿದರು.
ಮೇಳದಲ್ಲಿ 11ರಾಜ್ಯ ಮತ್ತು 20ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಉತ್ಪನ್ನಗಳ ಪ್ರದರ್ಶನಕ್ಕಾಗಿ 75ಮಳಿಗೆಗಳನ್ನು ಸಿದ್ಧಗೊಳಿಸಲಾಗಿದೆ. ಇದಲ್ಲದೆ, ಮುಂದಿನ ಮೂರು ದಿನಗಳ ಕಾಲ ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ವಿಚಾರ ಸಂಕಿರಣಗಳು ನಡೆಯಲಿವೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
ಮೂರು
ದಿನಗಳ
‘ಬಯೋ
ಮೇಳ-2007’ಕ್ಕೆ
ಭರದ
ಸಿದ್ಧತೆ