ಉಳ್ಳಾಲ ಕಾಂಗ್ರೆಸ್ಗೆ, ಬಿಜೆಪಿ-ಜೆಡಿಎಸ್ಗೆ ಮುಖಭಂಗ!
ಉಳ್ಳಾಲ : ಉಳ್ಳಾಲ ವಿಧಾನಸಭಾ ಚುನಾವಣಾ ಫಲಿತಾಂಶ ಮಂಗಳವಾರ ಬೆಳಗ್ಗೆ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಜಯ ಪಡೆದಿದ್ದಾರೆ.
ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಚಂದ್ರಶೇಖರ ಉಚ್ಚಿಲ್ ಅವರನ್ನು 8032ಮತಗಳ ಅಂತರದಿಂದ ಖಾದರ್ ಸೋಲಿಸಿದ್ದಾರೆ. ಖಾದರ್ ಪಡೆದ ಒಟ್ಟು ಮತಗಳು -48,271. ಜೆಡಿಎಸ್ ಕ್ಷೇತ್ರದಲ್ಲಿ ಮುಖಭಂಗ ಅನುಭವಿಸಿದೆ.
ರಾಜ್ಯ ರಾಜಕೀಯದಲ್ಲಿ ಪರಿಣಾಮ ಬೀರಲಿದೆ ಎನ್ನಲಾಗಿದ್ದ ಉಳ್ಳಾಲ ವಿಧಾನಸಭಾ ಚುನಾವಣೆ ಫಲಿತಾಂಶದ ಪರಿಣಾಮಗಳನ್ನು ಕಾದು ನೋಡಬೇಕಾಗಿದೆ.
ದೋಸ್ತಿ ಸರ್ಕಾರದ ಮೈತ್ರಿ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಈ ಚುನಾವಣೆ ಮೂಲಕ ಶಕ್ತಿ ಪ್ರದರ್ಶನಕ್ಕೆ ನಿಂತಿದ್ದವು. ಒಂದು ವೇಳೆ ಕಾಂಗ್ರೆಸ್, ಕ್ಷೇತ್ರದಲ್ಲಿ ಸೋಲು ಕಂಡಿದ್ದರೇ, ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಕ್ಕಟ್ಟಿಗೆ ಸಿಲುಕುತ್ತಿದ್ದರು. ಅವರ ಸ್ಥಾನವನ್ನು ಸಿದ್ದರಾಮಯ್ಯ ಅಲಂಕರಿಸುತ್ತಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.
ಉಳ್ಳಾಲ ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗಳು :
- ಯು.ಟಿ.ಖಾದರ್(ಕಾಂಗ್ರೆಸ್)
- ಚಂದ್ರಶೇಖರ ಉಚ್ಚಿಲ್(ಬಿಜೆಪಿ)
- ಅಬೂಬಕ್ಕರ್(ಜೆಡಿಎಸ್)
- ಬಾಲಕೃಷ್ಣ ಶೆಟ್ಟಿ(ಸಿಪಿಎಂ)
- ಭರತ್ ರಾಜ್ ಶೆಟ್ಟಿ(ಪಕ್ಷೇತರ)
ಪೂರಕ
ಓದಿಗೆ
ಉಳ್ಳಾಲ
ಚುನಾವಣೆ:
ಕಾಂಗ್ರೆಸ್ಸಿಗ
ಖಾದರ್ನಿಂದ
ನೀತಿ
ಉಲ್ಲಂಘನೆ
ಉಳ್ಳಾಲ
ಚುನಾವಣೆ:
ಮೊದಲ
ಹಂತದಲ್ಲಿ
ಶೇ
20ರ
ಮತದಾನ
ಬಿಎಸ್ವೈ,
ಖರ್ಗೆಗೆ
ಚುನಾವಣಾ
ಆಯೋಗದ
ನೋಟೀಸ್
ಉಳ್ಳಾಲ
ವ್ಯಾಪ್ತಿಯಲ್ಲಿ
ಜೂನ್
2ರಂದು
ಸಾರ್ವತ್ರಿಕ
ರಜೆ