ಅಂಬಿಗೆ 55 : ತಟ್ಟಿ ಚಪ್ಪಾಳೆ
ನಟ
ಅಂಬರೀಷ್
ಮಂಗಳವಾರ(ಮೇ.29)
ತಮ್ಮ
55ನೇ
ಹುಟ್ಟುಹಬ್ಬವನ್ನು
ಆಚರಿಸಿಕೊಂಡರು.
ಪತ್ನಿ
ಸುಮಲತಾ,
ಪುತ್ರ
ಅಭಿಷೇಕ್
ಗೌಡನ
ಜೊತೆ
ಜೆ.ಪಿ.ನಗರದಲ್ಲಿರುವ
ವೆಂಕಟೇಶ್ವರ
ದೇವಸ್ಥಾನಕ್ಕೆ
ತೆರಳಿ
ವಿಶೇಷ
ಪೂಜೆ
ಸಲ್ಲಿಸಿದರು.
ನಟ
ವಿಷ್ಣುವರ್ಧನ್,
ಭಾರತಿ
ವಿಷ್ಣುವರ್ಧನ್
ಶುಭ
ಕೋರಿದರು.
***
ಆಂಗ್ಲಶಾಲೆಗಳ ವಿರುದ್ಧ ಹೈಕೋರ್ಟ್ ಸಿಡಿಮಿಡಿ
ಮಾತೃಭಾಷೆಯಲ್ಲಿ ಶಿಕ್ಷಣ ನೀಡದ, ಖಾಸಗಿ ಆಂಗ್ಲ ಶಾಲೆಗಳ ವರ್ತನೆಯನ್ನು ಹೈಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಅದು ಒತ್ತಾಯಿಸಿದೆ.
***
ವೀರೇಂದ್ರ
ಹೆಗ್ಗಡೆ
ಕೈಯಲ್ಲಿ
ವಿಜಯಕರ್ನಾಟಕ!
‘ವಿಜಯ ಕರ್ನಾಟಕ’ ದಿನ ಪತ್ರಿಕೆಯ ಅತಿಥಿ ಸಂಪಾದಕರಾಗಿ ಧರ್ಮಸ್ಥಳದ ಶ್ರೀ ಡಿ.ವೀರೇಂದ್ರ ಹೆಗ್ಗಡೆ ಕಾರ್ಯ ನಿರ್ವಹಿಸಲಿದ್ದಾರೆ. ಗುರುವಾರ(ಮೇ.30)ದ ಸಂಚಿಕೆ ಹೇಗಿರುತ್ತದೆಯೋ ಎಂಬ ನಿರೀಕ್ಷೆ ಓದುಗರದು.
***
ಸಕತ್ ಹಾಟ್ ಮಗಾ ಖ್ಯಾತಿಯ ನಗರದ ಜನಪ್ರಿಯ ಎಫ್ಎಂ ರೇಡಿಯೋ ವಾಹಿನಿ ‘ರೇಡಿಯೋ ಮಿರ್ಚಿ 98.3’ ನಡೆಸಿದ ನೋಕಿಯಾ ಆರ್ಜೆ ಹಂಟ್ ಸಫಲವಾಗಿದೆ.
ಅಂತಿಮ ಹಂತದ ಸುತ್ತಿನಲ್ಲಿ 5 ಜನ ಅಭ್ಯರ್ಥಿಗಳು ತಮ್ಮ ಪ್ರತಿಭೆಯನ್ನು ಪಣಕ್ಕೊಡ್ಡಿದ್ದರು. ಕೊನೆಗೆ ನವೀನ್ ಹಾಗೂ ಪಲ್ಲವಿಯನ್ನು ಹೊಸ ಆರ್ಜೆಗಳೆಂದು ಘೋಷಿಸಲಾಯಿತು.
***
ಹಾಸನದ ಇಸ್ರೋ ಕೇಂದ್ರಕ್ಕೆ ಕಲಾಂ
ರಾಷ್ಟ್ರಪತಿ ಅಬ್ದುಲ್ಕಲಾಂ, ಜೂನ್8ರಂದು ಹಾಸನದ ಇಸ್ರೋ ಮಾಸ್ಟರ್ ಕಂಟ್ರೋಲ್ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.
ಮಾಚ್12ರಂದು ಫ್ರೆಂಚ್ಗಯಾನಾದ ಕೌರುವಿನಿಂದ ಉಡಾವಣೆಗೊಂಡ ಇನ್ಸಾಟ್-4ಬಿ ಉಪಗ್ರಹವನ್ನು ಕಲಾಂರವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಜಿ. ಮಾಧವನ್ ನಾಯರ್ ಹೇಳಿದ್ದಾರೆ.
***
ತಂಬಾಕು-ಕ್ಯಾನ್ಸರ್ ಬಗ್ಗೆ ಪೋನಲ್ಲಿ ಮಾತು
ಮೇ 31ರಂದು ನಡೆಯುವ ವಿಶ್ವ ತಂಬಾಕು ರಹಿತ ದಿನಾಚರನೆ ಪ್ರಯುಕ್ತ, ಬೆಂಗಳೂರು ಆಕಾಶವಾಣಿ ಕೇಂದ್ರವು ದಿನಾಂಕ 29. 30 ಹಾಗೂ 31ರಂದು ಫೋನ್-ಇನ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಮೂರು ದಿನ ರಾತ್ರಿ 9:30 ರಿಂದ 10: 30ರವರೆಗೆ ಫೋನ್-ಇನ್ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 29ರಂದು ತಂಬಾಕು ಹಾಗೂ ಕ್ಯಾನ್ಸರ್ ವಿಷಯವಾಗಿ ಡಾ. ಎಂ. ಚಂದ್ರಶೇಖರ್, ದಿನಾಂಕ 30ರಂದು ತಂಬಾಕು ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಡಾ. ಬಿ. ರಮೇಶ್, ದಿನಾಂಕ 31ರಂದು ತಂಬಾಕಿನಿಂದ ಹೃದಯ ಮೇಲಿನ ದುಷ್ಪರಿಣಾಮಗಳು ಎಂಬುದರ ಬಗ್ಗೆ ಡಾ.ಎ . ಗೋಪಿ ಮಾತನಾಡಲಿದ್ದಾರೆ.
ಆಸಕ್ತರು ತಮ್ಮ ಪ್ರಶ್ನೆಗಳನ್ನು ಕೇಳಲು ಬಳಸಬಹುದಾದ ದೂರವಾಣಿ ಸಂಖ್ಯೆಗಳು: 2237 0477/88/99