ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಕ್ಷಿಪ್ತ ಬಾವಿನೀರು ಸೇವನೆ : 150ಜನರಿಗೆ ವಾಂತಿ-ಭೇದಿ
ಗುಲ್ಬರ್ಗಾ : ವಿಕ್ಷಿಪ್ತ ಬಾವಿಯಾಂದರ ಕಲುಷಿತ ನೀರು ಕುಡಿದ ಪರಿಣಾಮ, 150ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಶಹಾಪುರ ತಾಲ್ಲೂಕಿನ ಮಡಬೂಳ ಗ್ರಾಮದಲ್ಲಿ ನಡೆದಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆಯೇ ವೈದ್ಯರ ತಂಡವೊಂದು ಗ್ರಾಮಕ್ಕೆ ತೆರಳಿ ಚಿಕಿತ್ಸಾ ವ್ಯವಸ್ಥೆ ಕೈಗೊಂಡಿದೆ. ತೊಂದರೆಗೀಡಾದವರನ್ನು ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಳಿನಿ ನಮೋಶಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದರಿಂದ, ಗ್ರಾಮಸ್ಥರಿಗೆ ಕುಡಿಯಲು ಸಾರ್ವಜನಿಕ ನೆಲ್ಲಿಗಳಿಂದ ನೀರು ದೊರೆತಿಲ್ಲ. ಹಾಗಾಗಿ ಸಮೀಪದಲ್ಲಿರುವ ಕುಡಿಯಲು ಬಳಕೆಯಲ್ಲಿರದ ತೆರೆದಬಾವಿಯ ನೀರನ್ನು ಸೇವಿಸಿದ್ದಾರೆ. ಆನಂತರ ತಕ್ಷಣವೇ ವಾಂತಿ ಭೇದಿಗೊಳಗಾಗಿದ್ದಾರೆ. ಈ ಬಾವಿಯ ನೀರನ್ನು ಬಟ್ಟೆ ತೊಳೆಯಲು ಹಾಗೂ ದನಕರುಗಳ ಸ್ನಾನ ಮಾಡಿಸಲು ಬಳಸಲಾಗುತ್ತಿತ್ತು ಎಂದು ಅವರು ವಿವರಿಸಿದರು.
(ಯುಎನ್ಐ)
Comments
Story first published: Tuesday, May 29, 2007, 5:30 [IST]