ಇನ್ಫಿ ಮೂರ್ತಿಯನ್ನು ಕೋರ್ಟ್ಗೆಳೆದ ರಕ್ಷಣಾ ವೇದಿಕೆ
ಬೆಂಗಳೂರು : ಕನ್ನಡ ರಕ್ಷಣಾ ವೇದಿಕೆಯ ವಕೀಲರ ವೇದಿಕೆ ಮೇ 3 ರಂದು ಇನ್ಫೋಸಿಸ್ನ ಮುಖ್ಯಸ್ಥ ಎನ್.ಆರ್. ನಾರಾಯಣ ಮೂರ್ತಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದಕೆ, ಈಗ ಫಲ ಸಿಕ್ಕಿದೆ. ನಗರದ ಕೆಳ ನ್ಯಾಯಾಲಯ ಕ್ರಿಮಿನಲ್ ಕೇಸ್ ಹಾಕಿ, ಜೂನ್ 21ರೊಳಗೆ ಕೋರ್ಟಿಗೆ ಹಾಜರಾಗುವಂತೆ ಇನ್ಫಿಮೂರ್ತಿಗೆ ಆದೇಶ ನೀಡಿದೆ.
ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪದ ವಿಚಾರಣೆ ನಡೆಸಿದ ನಗರದ 2ನೇ ಹೆಚ್ಚುವರಿ ಹಾಗೂ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಧೀಶ ಎಂ. ಮುಜಾಹಿದ್-ಉಲ್ಲಾರವರು 1971 ನೇ ರಾಷ್ಟ್ರೀಯ ಐಕ್ಯತೆ ಗೌರವ ಕಾಯ್ದೆಯ ಕಾಲಂ 3ರ ಪ್ರಕಾರ ನಾರಾಯಣ ಮೂರ್ತಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವಂತೆ ಆದೇಶ ನೀಡಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಏಪ್ರಿಲ್ 16 ರಂದು ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ನಾರಾಯಣ ಮೂರ್ತಿರವರ ವಿರುದ್ಧ ದೂರು ನೀಡಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ಜರುಗಿಸದ ಕಾರಣ , ವೇದಿಕೆಯ ವಕೀಲರು ನ್ಯಾಯಾಲಯದ ಮೊರೆ ಹೊಕ್ಕರು ಎನ್ನಲಾಗಿದೆ.
ಇನ್ಫಿಮೂರ್ತಿಯವರು ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ ಎಂಬ ಸುದ್ದಿ ಇನ್ಫೋಸಿಸ್ ವಕ್ತಾರರಿಂದ ಸಿಕ್ಕಿದೆ.
ಘಟನೆಯ ಹಿನ್ನೆಲೆ:
ಏಪ್ರಿಲ್ 8 ರಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದೇಶಿಯರಿಗೆ ಇರಸು-ಮುರಸು ಆಗುತ್ತದೆಂಬ ಕಾರಣ ಕೊಟ್ಟು, ರಾಷ್ಟ್ರಗೀತೆಯನ್ನು ಹಾಡುವುದರ ಬದಲು, ವಾದ್ಯಗಳ ಮೂಲಕ ನುಡಿಸಲಾಯಿತು. ಈ ಘಟನೆಗೆ ಸ್ವತಃ ರಾಷ್ಟ್ರಪತಿಗಳ ಸಮ್ಮುಖದಲ್ಲಿ ನಡೆದಿದ್ದು ದುರಂತ.ನಂತರ ಇನ್ಫಿ ಮೂರ್ತಿರವರು ಸಾರ್ವಜನಿಕವಾಗಿ ಕ್ಷಮೆ ಯಾಚನೆ ಮಾಡಿದ್ದರು.
ಪೂರಕ
ಓದಿಗೆ
ರಾಷ್ಟ್ರಗೀತೆ
ವಿವಾದ
:
ಕ್ಷಮೆ
ಕೋರಿದ
ನಾರಾಯಣಮೂರ್ತಿ
ನಾರಾಯಣಮೂರ್ತಿ
ಮಾತಲ್ಲಿ
ತಪ್ಪಿಲ್ಲ
-ಎಸ್.ಎಲ್.ಭೈರಪ್ಪ
ನಾರಾಯಣಮೂರ್ತಿ
ಏನಂದರು?
:
ಸರ್ಕಾರಕ್ಕೆ
ವರದಿ
ನಾರಾಯಣಮೂರ್ತಿ
ವಿರುದ್ಧ
ದೂರು:
ಜೂ.2
ವಿಚಾರಣೆ