ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಚಿವ ರಾಮಚಂದ್ರಗೌಡರ ಬಾಯಲ್ಲಿ ಇಂಥಾ ಮಾತೇ?!
ಬೆಂಗಳೂರು : ಲಾಟರಿ ನಿಷೇಧಿಸಲು ಸಾಧ್ಯವಾಗದಿದ್ದ ಪಕ್ಷದಲ್ಲಿ, ಅಧಿಕಾರ ತ್ಯಜಿಸುವುದಾಗಿ ಹೇಳಿಕೆ ನೀಡಿದ್ದ ಬಿಜೆಪಿ ಸಚಿವ ರಾಮಚಂದ್ರ ಗೌಡ, ಮೌಲ್ಯಾಧಾರಿತ ರಾಜಕಾರಣಕ್ಕೆ ಮಾದರಿಯಂತೆ ನಿಂತಿದ್ದರು. ಆದರೆ ಅವರ ಇತ್ತೀಚಿನ ಹೇಳಿಕೆ ವಿವಾದ ಸೃಷ್ಟಿಸುವ ಸಾಧ್ಯತೆಗಳಿವೆ.
ನರ್ಸ್ ಜಯಲಕ್ಷ್ಮಿಮತ್ತು ಬಿಜೆಪಿ ಶಾಸಕ ರೇಣುಕಾಚಾರ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಚಂದ್ರ ಗೌಡ ಹೇಳಿಕೆ ನೀಡಿದ್ದಾರೆ.
‘ಇದು ಸಹಜ ಪ್ರಕರಣ. ರೇಣುಕಾಚಾರ್ಯರ ವರ್ತನೆ ಮಾನವ ಸಹಜವಾದದ್ದೇ ಆಗಿದೆ. ಕಾಮನೆ ಗೆದ್ದವರು ಯಾರಿದ್ದಾರೆ. ಈ ವೈಯಕ್ತಿಕ ವಿಷಯವನ್ನು ಸಾರ್ವಜನಿಕಗೊಳಿಸುವುದು ತಪ್ಪು’ ಎಂಬುದು ಸಚಿವರ ಮಾತಿನ ಅಭಿಪ್ರಾಯ ಸಾರ. ಈ ಬಗ್ಗೆ ಓದುಗರು ಏನನ್ನುವರೋ?
(ದಟ್ಸ್ ಕನ್ನಡ ವಾರ್ತೆ)
Story first published: Wednesday, May 23, 2007, 5:30 [IST]