ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೈಕಲ್ ತುಳಿಯೋಣ ಬಾ..ಭದ್ರಾವತಿಯಲ್ಲಿ ಸೈಕಲ್ ರೇಸ್
ಭದ್ರಾವತಿ : ರಾಜ್ಯಮಟ್ಟದ ಟ್ರ್ಯಾಕ್ ಸೈಕಲ್ ರೇಸ್ ಸ್ಪರ್ಧೆ ಮೇ 22ರಿಂದ 24ರವರೆಗೆ ನಗರದಲ್ಲಿ ನಡೆಯಲಿದೆ ಎಂದು ನಗರಸಭಾ ಆಯುಕ್ತ ಕೆ.ಎಂ.ಧರ್ಮಪ್ಪ ಹೇಳಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಲಸಂಪನ್ಮೂಲ ಸಚಿವ ಕೆ.ಎಸ್.ಈಶ್ವರಪ್ಪ ಸ್ಪರ್ಧೆ ಉದ್ಘಾಟಿಸಲಿದ್ದಾರೆ. ಭದ್ರಾವತಿ ನಗರಸಭೆ ಹಾಗೂ ರಾಜ್ಯ ಸೈಕ್ಲಿಂಗ್ ಸಂಸ್ಥೆ, ಶಿವಮೊಗ್ಗ ನಗರಸಭೆ, ಜಿಲ್ಲಾ ಪರಿಷತ್ ಮತ್ತಿತರ ಸರ್ಕಾರಿ ಇಲಾಖೆಗಳ ಜಂಟಿ ಆಶ್ರಯದಲ್ಲಿ ಸ್ಪರ್ಧೆ ನಡೆಯಲಿದೆ ಎಂದು ವಿವರಿಸಿದರು.
ಭದ್ರಾವತಿಯಲ್ಲಿ ಮೊಟ್ಟಮೊದಲ ಬಾರಿಗೆ ಈ ಸ್ಪರ್ಧೆ ನಡೆಯುತ್ತಿದೆ. ನಗರದ ರಸ್ತೆಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಮೊದಲ ಮೂವರು ವಿಜೇತರಿಗೆ ಅನುಕ್ರಮವಾಗಿ 5,000, 3,000 ಹಾಗೂ 2,000 ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, May 22, 2007, 5:30 [IST]